Advertisement

Manjeshwar ಸಂಸದರಿಗೆ ಕಪ್ಪು ಪತಾಕೆ ಪ್ರದರ್ಶನ; ಐವರು ಎಸ್‌ಡಿಪಿಐ ಕಾರ್ಯಕರ್ತರ ಬಂಧನ

11:34 PM Nov 29, 2023 | Team Udayavani |

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರಿಗೆ ಕಪ್ಪು ತಪಾಕೆ ತೋರಿದ ಆರೋಪದಡಿ ಎಸ್‌ಡಿಪಿಐಯ ಐವರು ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮದಂಗವಾಗಿ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

Advertisement

ಅಂಬಿತ್ತಾಡಿ ನಿವಾಸಿ ಅಬ್ದುಲ್‌ ರಹಿಮಾನ್‌ (36), ಕುಂಜತ್ತೂರಿನ ಇಬ್ರಾಹಿಂ (51), ಪಾವೂರಿನ ಅಬ್ದುಲ್‌ ರೌಫ್‌ (28), ಕುಂಜತ್ತೂರು ಕೆ.ಜೆ.ಎಂ. ರಸ್ತೆಯ ಸಿಯಾದ್‌ ಹುಸೈನ್‌(33) ಮತ್ತು ಸತ್ಯಡ್ಕದ ಅಶ್ರಫ್‌ (43)ನನ್ನು ಬಂಧಿಸಿ ಬಳಿಕ ಇವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next