Advertisement

ಅಸಮಾಧಾನ ಸರಿಪಡಿಸಿಕೊಳ್ಳಿ: ಜಿಲ್ಲಾ ಪ್ರಮುಖರ ಸಭೆಯಲ್ಲಿ ಬಿ.ಎಲ್‌. ಸಂತೋಷ್‌ ಸೂಚನೆ

01:13 AM Apr 17, 2023 | Team Udayavani |

ಉಡುಪಿ: ಬಿಜೆಪಿ ಮಂಗಳೂರು ವಿಭಾಗದ ಡಿಜಿಟಲ್‌ ಮೀಡಿಯಾ ಕಾರ್ಯಕರ್ತರ ಸಮಾವೇಶಕ್ಕೆ ಆಗ ಮಿಸಿದ್ದ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ 3 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಸಹಿತವಾಗಿ ಪ್ರಮುಖರ ಸಭೆ ನಡೆಸಿ ಯಾವುದೇ ಅಸಮಾಧಾನಗಳಿದ್ದರೂ ಒಂದೆರಡು ದಿನಗಳಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.

Advertisement

ಉಡುಪಿ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಮಂಗಳೂರು ವಿಭಾಗದ ಪ್ರಮುಖರ ಸಭೆಯನ್ನು ಉಚ್ಚಿಲದ ಮೊಗವೀರ ಭವನ ದಲ್ಲಿ ರವಿವಾರ ನಡೆಸಿದ ಅವರು, ಚುನಾವಣೆ ಗೆಲ್ಲಲು ಬೇಕಾದ ಅಗತ್ಯ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಿದರು. ಬೂತ್‌ ಮಟ್ಟದಲ್ಲಿ ಆಗಬೇಕಿರುವ ಕಾರ್ಯಗಳ ಮಾಹಿತಿ ನೀಡಿರುವ ಜತೆಗೆ ಈಗಾಗಲೇ ಆಗಿರುವ ಕಾರ್ಯ ವರದಿ ಪಡೆದು, ಅಭ್ಯರ್ಥಿಗಳ ಸುತ್ತಾಟ, ಪಕ್ಷದ ವಿವಿಧ ಪ್ರಕೋಷ್ಠಗಳ ಸಿದ್ಧತೆ ಕುರಿತ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಬದಲಾವಣೆಯಿಂದ ಒಂದೆ ರಡು ಕ್ಷೇತ್ರದಲ್ಲಿ ಕೆಲವರಿಗೆ ಅಸಮಾಧಾನ ಆಗಿರ ಬಹುದು. ಅದನ್ನು ಚುನಾವಣೆಯ ಮುಖ್ಯ ವಿಷಯವನ್ನಾಗಿಸದೆ ಆದಷ್ಟು ಬೇಗ ಪೂರ್ಣ ಪ್ರಮಾಣದಲ್ಲಿ ಚುನಾವಣೆಗೆ ಧುಮುಕಿ 2018ರ ಮಾದರಿಯಲ್ಲೇ ಈ ಬಾರಿಯೂ ಎಲ್ಲ ಕ್ಷೇತ್ರಗಳಲ್ಲಿ ಗೆಲುವಿಗೆ ಶ್ರಮಿಸಬೇಕು ಎಂಬ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಭ್ಯರ್ಥಿಗಳಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ ಸಹಿತ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳು ಹಾಗೂ ಪ್ರಮುಖರು ಭೇಟಿ ಮಾಡಿ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next