Advertisement

ಮೂಗಿಗೆ ಬೆಣ್ಣೆ ಹಚ್ಚಲು ಸಿಎಂ ದೆಹಲಿಗೆ: ಬಿ.ಕೆ.ಹರಿಪ್ರಸಾದ್‌

08:59 PM Dec 27, 2022 | Team Udayavani |

ಸುವರ್ಣ ವಿಧಾನಸೌಧ: “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಲವು ಒಳ್ಳೆಯ ಸ್ನೇಹಿತರಿದ್ದಾರೆ. ಅವರ ಮೂಗಿಗೆ ಬೆಣ್ಣೆ ಹಚ್ಚಲು ದೆಹಲಿಗೆ ತೆರಳಿದ್ದರು’ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, “ಎಲ್ಲ ತಾಲೂಕುಗಳಲ್ಲಿ ಬಿಜೆಪಿ ಕಚೇರಿ ತೆರೆಯಬೇಕು. ಇದಕ್ಕಾಗಿ ದೆಹಲಿ ನಾಯಕರಿಗೆ ಕಪ್ಪ ಕಾಣಿಕೆ ಸಲ್ಲಿಸಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿಬಂದಿದ್ದಾರೆ. ಈ ಸರ್ಕಾರ ಆರು ತಿಂಗಳಲ್ಲ; ಆರು ದಿನಗಳು ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ದೆಹಲಿ ನಾಯಕರಿಗಂತೂ ಕಪ್ಪ ಕಾಣಿಕೆ ಸಲ್ಲಿಸಬೇಕು’ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next