Advertisement

ನಕ್ಸಲರಿಗೆ ಬೆಂಬಲ: ಟೀಕೆ

09:00 AM Sep 05, 2018 | Team Udayavani |

ಹೊಸದಿಲ್ಲಿ: ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಷ್ಟ್ರೀಯ ಸಲಹಾ ಮಂಡಳಿ (ಎನ್‌ಎಸಿ) ನಕ್ಸಲರಿಗೆ ಬೆಂಬಲ ನೀಡುವಂತೆ ವರ್ತಿಸುತ್ತಿತ್ತು. ರಾಜಕೀಯ ಲಾಭಕ್ಕಾಗಿ ದೇಶದ ಭದ್ರತೆಯಲ್ಲಿ ರಾಜಿ ಮಾಡಿಕೊಂಡಿತ್ತು ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ ನಾಯಕರಾದ ದಿಗ್ವಿಜಯ ಸಿಂಗ್‌, ಜೈರಾಮ್‌ ರಮೇಶ್‌ ನಕ್ಸಲರ ಜತೆ ಲಿಂಕ್‌ ಇರುವವರ ಪರ ಮಾತನಾಡುತ್ತಿದ್ದರು ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಟೀಕಿಸಿದ್ದಾರೆ. ಹೀಗಾಗಿ ಆ ಪಕ್ಷದ ಹೆಸರನ್ನು ಕಾಂಗ್ರೆಸ್‌ ಪಾರ್ಟಿ ಆಫ್ ಮಾವೋಯಿಸ್ಟ್ಸ್ ಅಥವಾ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ (ಮಾವೋಯಿಸ್ಟ್ಸ್) ಎಂದು ಬದಲಿಸಿಕೊಳ್ಳಬೇಕು ಎಂದು ಕಟಕಿಯಾಡಿದ್ದಾರೆ. 

Advertisement

ಇದೇ ವೇಳೆ ಐವರು ಹೋರಾಟಗಾರರನ್ನು ಬಂಧಿಸಿದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪುಣೆ ಪೊಲೀಸರ ವಿರುದ್ಧ ಬಾಂಬೆ ಹೈಕೋರ್ಟಲ್ಲಿ ಪಿಐಎಲ್‌ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next