Advertisement

ಕಷ್ಟಗಳ ಪರಿಹಾರಕ್ಕೆ ಬಿಜೆಪಿ ಬೆಂಬಲಿಸಿ

05:42 PM May 10, 2018 | Team Udayavani |

ಶಿರಹಟ್ಟಿ: ರಾಜ್ಯದಲ್ಲಿ ಸರಕಾರ ಬಡವರನ್ನು ಮತ್ತು ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ರೈತರು ಆತ್ಮ ಹತ್ಯೆಗೆ ಮುಂದಾಗಿರುವ ಘಟನೆಗಳು ನಡೆದಿವೆ. ಇಂತಹ ಸರಕಾರವನ್ನು ಬದಲಾಯಿಸಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಹೇಳಿದರು.

Advertisement

ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು. ಶಿರಹಟ್ಟಿ ಮತಕ್ಷೇತ್ರದಲ್ಲಿ ಬದಲಾವಣೆ ಬಯಸಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ರಾಜ್ಯದಲ್ಲಿ ರೈತರ ಸಂಕಷ್ಟಗಳನ್ನು ಪರಿಹಾರ ಒದಗಿಸುವಲ್ಲಿ ಸರಕಾರ ವಿಫಲವಾಗಿದ್ದು, ಈ ಬಾರೀ ಬಿಜೆಪಿ ಸರಕಾರ ರಚನೆಯಾಗುವುದರಲ್ಲಿ ಯಾವ ಸಂದೇಹವಿಲ್ಲ. ಪಕ್ಷದಲ್ಲಿ ಜಾತಿ ಆಧಾರಿತ ಮತ್ತು ಧರ್ಮ ಆಧಾರಿತ ರಾಜಕಾರಣ ಮಾಡದೇ ಪಾರದರ್ಶಕ ಅಡಳಿತ ನೀಡುವುದಕ್ಕಾಗಿ ಜನತೆ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ತಾಲೂಕು ಬಿಜೆಪಿ ಕಾರ್ಯದರ್ಶಿ ತಿಮ್ಮರೆಡ್ಡಿ ಮರಡ್ಡಿ ಮಾತನಾಡಿದರು. ದೇವರೆಡ್ಡಿ ಅಳವಂಡಿ, ಡಾ| ಶಶಿಧರ ಪುರದಪ್ಪನವರ, ಹನುಮರೆಡ್ಡಿ ಭರಮರೆಡ್ಡಿ, ಹೇಮಂತರೆಡ್ಡ ಅಳವಂಡಿ, ಮುತ್ತು ಅಳವಂಡಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. 

ಮಾಜಿ ಶಾಸಕ ಗಂಗಣ್ಣ ಮಾಂತಶೆಟ್ಟರ, ಬಸಣ್ಣ ಹತ್ತಿಕಾಳ, ವಿಶ್ವನಾಥ ಕಪ್ಪತ್ತನವರ, ಚಂಬಂಣ್ಣ ಬಾಳಿಕಾಯಿ, ತಿಮ್ಮರೆಡ್ಡ ಅಳವಂಡಿ, ಜಾನು ಲಮಾಣಿ, ಡಿ.ವೈ. ಹುನಗುಂದ, ಮೋಹನ ಗುತ್ತೆಮ್ಮನವರ, ನಾಗರಾಜ ಅಕ್ಕೂರ, ಆರ್‌.ಆರ್‌. ಗಡ್ಡದ್ದೇವರಮಠ, ಕೊಟ್ರೇಶ ಸಜ್ಜನ, ಬಸವರೆಡ್ಡಿ ಗೋವಣ್ಣವರ, ಕಾಂತೇಶರೆಡ್ಡಿ ಅಳವಂಡಿ, ಮಹೇಶ ಬಡ್ನಿ, ವಿಜಯ ಮೇಕಳಿ, ಅಶೋಕ ಪಲ್ಲೇದ, ಶಿವನಗೌಡ್ರ ಕಂಠಿಗೌಡ್ರ, ಈಶ್ವರ ಹುಲ್ಲಲ್ಲಿ, ಶಂಕರ ಮರಾಠೆ, ಕುಮಾರಸ್ವಾಮಿ ಹಿರೇಮಠ, ಮಂಜುನಾಥಗೌಡ ಪಾಟೀಲ್‌, ತಿಪ್ಪಣ್ಣ ಕೊಂಚಿಗೇರಿ, ಶೇಖಪ್ಪ ಸಜ್ಜನರ, ಡಾ| ಸುಭಾಸ ಬಡ್ನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next