Advertisement

ಕಣ್ಣೂರು ಮಂಡಲ ಬಿಜೆಪಿ ಉಪಾಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ

11:58 AM Mar 09, 2017 | Team Udayavani |

ಕಣ್ಣೂರು : ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಪುನಃ ಇನ್ನೊಂದು ರಾಜಕೀಯ ಹಿಂಸೆಯ ಘಟನೆ ವರದಿಯಾಗಿದೆ. ಬಿಜೆಪಿಯ ಕಣ್ಣೂರು ಮಂಡಲದ ಉಪಾಧ್ಯಕ್ಷ ಸುಶೀಲ್‌ ಎಂಬವರ ಮೇಲೆ ಬುಧವಾರ ರಾತ್ರಿ ಓಲಶೆರಿ ಕಾವು ಎಂಬಲ್ಲಿ ಗಂಭೀರ ಹಲ್ಲೆ ನಡೆಸಲಾಗಿದೆ.

Advertisement

ಸುಶೀಲ್‌ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ; ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯು ರಾಜಕೀಯ ಕೊಲೆಗಳಿಗೆ ಕುಖ್ಯಾತವಾಗಿದೆ. ಇಲ್ಲಿ ಆಗೀಗ ಎಂಬಂತೆ ನಡೆಯುತ್ತಿರುವ ಬಿಜೆಪಿ – ಸಿಪಿಎಂ ಸಂಘರ್ಷಕ್ಕೆ ಉಭಯ ಪಕ್ಷಗಳ ಹಲವು ಕಾರ್ಯಕರ್ತರು ಬಲಿಯಾಗಿದ್ದಾರೆ.

ಕಣ್ಣೂರು ಮಂಡಲ ಉಪಾಧ್ಯಕ್ಷ ಸುಶೀಲ್‌ ಅವರ ಮೇಲಿನ ಹಲ್ಲೆಗೆ ಬಿಜೆಪಿಯು ಸಿಪಿಎಂ ಕಾರಣವೆಂದು ಆರೋಪಿಸಿದೆ. ಈ ಆರೋಪವನ್ನು ತಿರಸ್ಕರಿಸಿರುವ ಸಿಪಿಎಂ, “ಇದು ಬಿಜೆಪಿಯೊಳಗಿನ ಕಲಹ – ವೈಷಮ್ಯದ ಫ‌ಲವಾಗಿ ನಡೆದಿರುವ ಹಿಂಸೆಯಾಗಿದೆ’ ಎಂದು ಹೇಳಿದೆ. 

2016ರ ಮೇ ತಿಂಗಳಲ್ಲಿ ನಡೆದಿದ್ದ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಎಲ್‌ಡಿಎಫ್ ನೇತೃತ್ವದ ಸಿಪಿಐ ಎಂ ಅಧಿಕಾರಕ್ಕೆ ಮರಳಿತ್ತು. ಆರ್‌ಎಸ್‌ಎಸ್‌ ಕಣ್ಣೂರು ಜಿಲ್ಲೆಯಲ್ಲಿ ಉದ್ದೇಶಪೂರ್ವಕವಾಗಿ ಅಶಾಂತಿಯನ್ನು ಸೃಷ್ಟಿಸುತ್ತಿದೆ ಎಂದು ವಿಜಯನ್‌ ಆರೋಪಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next