Advertisement

ಬಳಗಾನೂರು ಪಪಂ ಚುನಾವಣೆ: ಬಿಜೆಪಿ ಚುರುಕಿನ ಪ್ರಚಾರ

01:02 PM Dec 23, 2021 | Team Udayavani |

ಬಳಗಾನೂರು: ಕಾಂಗ್ರೆಸ್‌ ಶಾಸಕ ಆರ್‌.ಬಸನಗೌಡ ತುರ್ವಿಹಾಳ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದಾರೆ. ಕ್ಷೇತ್ರದಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಅವರಿಗೆ ಕಾಣಿಸುತ್ತಿಲ್ಲ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹೇಳಿದರು.

Advertisement

ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ವಾರ್ಡವಾರು ಹಮ್ಮಿಕೊಂಡ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನಪರ ಅಭಿವೃದ್ಧಿ ಕಾರ್ಯಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಉಮೇದುವಾರರಿಗೆ ಶ್ರೀರಕ್ಷೆಯಾಗಲಿವೆ. ಬಿಜೆಪಿಯ ಅಭಿವೃದ್ಧಿ ಕಾರ್ಯಗಳ ಕುರಿತು ಕಾರ್ಯಕರ್ತರು, ಉಮೇದುವಾರರು ಮನೆ-ಮನೆಗೆ ಭೇಟಿ ನೀಡಿ ಮತದಾರರ ಮನವೊಲಿಸಬೇಕು ಎಂದರು.

ಮಾಜಿಸಂಸದಕೆ.ವಿರುಪಾಕ್ಷಪ್ಪ,ಜಿಪಂ ಮಾಜಿ ಸದಸ್ಯ ಶಿವನಗೌಡ ಗೊರೇಬಾಳ, ಮುಖಂಡರಾದ ಡಾ| ಬಸವಲಿಂಗಪ್ಪ ದಿವಟರ್‌, ಬಿ.ತಿಕ್ಕಯ್ಯ, ಎಚ್‌. ಮಹಾಬಳೇಶ್ವರ, ನಾಗಯ್ಯಸ್ವಾಮಿ, ಮಂಜುನಾಥ ಕರಡಕಲ್‌, ವೀರೇಶ ಗಾಳಿಪೂಜಿ ಮಾತನಾಡಿದರು. ಮುಖಂಡರಾದ ದೊಡ್ಡಪ್ಪ ಕಡಬೂರು, ಬಸವರಾಜಸ್ವಾಮಿ ಹಸಮಕಲ್‌, ವಿರುಪಣ್ಣ ಗುತ್ತೇದಾರ, ವೀರೇಶ ತಾಳಿಕೋಟಿ, ಅಮರಯ್ಯಸ್ವಾಮಿ, ಎಂಡಿ ಆಲಂಸಾಬ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next