Advertisement

ತಾಳ ತಪ್ಪುತ್ತಿರುವ ಹರತಾಳ ಬಿಜೆಪಿ ಕರೆಗೆ ಕುಂಬಳೆ, ಉಪ್ಪಳ ಬಂದ್‌!

06:55 AM Jul 31, 2017 | Team Udayavani |

ಕುಂಬಳೆ: ಕೇರಳ ರಾಜ್ಯದಲ್ಲಿ ರಾಜಕೀಯ ಕೊಲೆಗಳು ನಿರಂತರವಾಗಿ ಮುಂದುವರಿಯುತ್ತಿದ್ದು ಇದರ ಪ್ರತಿ
ಭಟನೆಗಾಗಿ ರಾಜಕೀಯ ಪಕ್ಷಗಳು ಹರತಾಳದ ಅಸ್ತ್ರ  ಪ್ರಯೋಗಿಸುತ್ತಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ.

Advertisement

ರಾತ್ರಿ ಕೊಲೆ ನಡೆದು ಬೆಳಗಾಗುವಷ್ಟರಲ್ಲಿ ಹರತಾಳ ಘೋಷಣೆಯಾಗಿರುತ್ತದೆ. ಇದರಿಂದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸಬೇಕಾಗುವುದು. ಹಳ್ಳಿಯಲ್ಲಿ ಕೇವಲ ಖಾಸಗಿ ಬಸ್‌ ಸಂಚಾರವಿರುವ ಪ್ರದೇಶದ ಜನತೆ ಹರತಾಳದ ಕಹಿ ಅನುಭವವಕ್ಕೆ ಸಿಲುಕಬೇಕಾಗಿದೆ.

ಯಾವುದಾದರೊಂದು ಪ್ರದೇಶದಲ್ಲಿ ಕೊಲೆ ಇನ್ನಿತರ ಅಹಿತಕರ ಘಟನೆ ನಡೆದಾಗ ಇಡೀ ರಾಜ್ಯದಲ್ಲಿ ಹರತಾಳ ಘೋಷಿಸಿ ರಾಷ್ಟ್ರೀಯ ನಷ್ಟ ಅನುಭವಿಸಬೇಕಾಗಿದೆ.ಇದರಿಂದ ಜನ ತತ್ತರಿಸುವಂತಾಗುವುದು. ಪೂರ್ವ ನಿಶ್ಚಿತ ಕಾರ್ಯಕ್ರಮಗಳು ಮೊಟಕುಗೊಂಡು ನಷ್ಟ ಅನುಭವಿಸ ಬೇಕಾಗುವುದು. 

ಹರತಾಳದ ಬಳಿಕ ಸರ್ವಪಕ್ಷ ಸಭೆ ಸೇರಿದಾಗ ಹರತಾಳಕ್ಕೆ ವಿರೋಧ ವ್ಯಕ್ತಪಡಿಸುವ ರಾಜ ಕೀಯ ನಾಯಕರೇ ಮುಂದೆ ತನ್ನ ರಾಜಕೀಯ ಪಕ್ಷದ ಹರತಾಳವನ್ನು ಬೆಂಬಲಿಸುವುದು ದುರಂತವಾಗಿದೆ. ಬಂದ್‌ ಮಾಡಬಾರದೆಂಬುದಾಗಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಬಂದ್‌ ಹರತಾಳವಾಗಿ ಮಾರ್ಪಟ್ಟಿದೆ.

ಪೂರ್ಣ ಬಂದ್‌
ರಾಜಧಾನಿ ತಿರುವನಂತಪುರದಲ್ಲಿ ಆರ್‌.ಎಸ್‌.ಎಸ್‌.ಕಾರ್ಯವಾಹ ರಾಜೇಶ್‌ ಕೊಲೆಯನ್ನು ಖಂಡಿಸಿ ರವಿವಾರದಂದಿನ ಬಿಜೆಪಿ ಕರೆ ನೀಡಿದ ಹರತಾಳದಲ್ಲಿ ಕುಂಬಳೆ ಉಪ್ಪಳ ಮೊದಲಾದೆಡೆಗಳಲ್ಲಿ ಪೇಟೆ ಪೂರ್ಣ ಬಂದ್‌ ಆಗಿದ್ದು ಜನಸಂಚಾರ ವಿರಳವಾಗಿತ್ತು. ರಜಾ ದಿನವಾದ ಕಾರಣ ಸರಕಾರಿ ಅರೆ ಸರಕಾರಿ ಮತ್ತು ಬ್ಯಾಂಕ್‌, ಶಾಲೆಗಳಿಗೆ ತೆರಳುವವರಿಗೆ ಒಂದು ಬೋನಸ್‌ ರಜೆ ನಷ್ಟವಾಯಿತು. ಸರಕಾರಿ, ಖಾಸಗಿ ಬಸ್‌ ಸಂಚರಿಸದಿದ್ದರೂ ಕೆಲವು ಖಾಸಗಿ ವಾಹನಗಳು ಭಯದಿಂದ ವಿರಳವಾಗಿ ಸಂಚರಿಸಿದವು. ತಾಳ ತಪ್ಪುತ್ತಿರುವ ಹರತಾಳದಿಂದ ರಾಜ್ಯದ ಅಭಿವೃದ್ಧಿ ಕುಂಟಿತವಾಗುತ್ತಿದೆ. ವಿದ್ಯಾಲಯಗಳಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದೆ ಎಂಬ ಆರೋಪ ಬಲವಾಗಿದೆ.ಆದರೆ ಯಾವ ಪಕ್ಷಗಳೂ ಹರತಾಳದಿಂದ ಹಿಂಜರಿಯಲು ಸಿದ್ಧವಿಲ್ಲ.

Advertisement

ಕೊಲೆಯನ್ನು ಪ್ರತಿಭಟಿಸಿ ಕುಂಬಳೆಯಲ್ಲಿ ಬಿ.ಜೆ.ಪಿ. ವತಿಯಿಂದ ಪ್ರತಿಭಟನೆ ನಡೆಯಿತು. ಪಕ್ಷದ ನಾಯಕರಾದ ಸುರೇಶ್‌ ಕುಮಾರ್‌ ಶೆಟ್ಟಿ, ಕೆ. ವಿನೋದನ್‌, ಎಚ್‌.ಸತ್ಯಶಂಕರ ಭಟ್‌, ಎಂ .ಶಂಕರ ಆಳ್ವ , ಬಾಬು ಗಟ್ಟಿ, ಶಂಕರ ಕುಂಟಂಗರಡ್ಕ, ಕೆ. ರಮೇಶ್‌ ಭಟ್‌, ಕೆ. ಸುಧಾಕರ ಕಾಮತ್‌, ದಿನೇಶ್‌ ಆರಿಕ್ಕಾಡಿ, ಹರೀಶ್‌ ಗಟ್ಟಿ, ಸುಜಿತ್‌ ರೈ, ಅನಿಲ್‌ ಶೆಟ್ಟಿ ಮುಂತಾದವರು ನೇತೃತ್ವ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next