Advertisement

BJP v/s ಕಾಂಗ್ರೆಸ್; ಮಂಗಳೂರು ಚಲೋಗೆ ಯಾರ ಅಪ್ಪನ ಅನುಮತಿ ಬೇಕಿಲ್ಲ

12:38 PM Sep 04, 2017 | Sharanya Alva |

ಮಂಗಳೂರು/ಬೆಂಗಳೂರು: ಬಿಜೆಪಿ ಆಯೋಜಿಸಿರುವ ಮಂಗಳೂರು ಚಲೋ ಬೈಕ್ ಜಾಥಾ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಂಗಳೂರು ಚಲೋಗೆ ಯಾರ ಅಪ್ಪನ ಅಪ್ಪಣೆಯೂ ಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಮಗೆ ಇನ್ನೂ ಅನುಮತಿ ಕೊಟ್ಟಿಲ್ಲ. ಆದರೆ ಅನುಮತಿ ಕೊಡದಿದ್ದರೂ ಜಾಥಾ ನಡೆದೇ ನಡೆಯುತ್ತದೆ ಎಂದರು.

ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ ಎಂದು ಬಿಎಸ್ ವೈ ಆಕ್ರೋಶ ವ್ಯಕ್ತಪಡಿಸಿದರು.

ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡಿಸಿ ಮತ್ತು ಇಂತಹ ಪ್ರಕರಣಗಳಲ್ಲಿ ತೊಡಗಿರುವ ಪಿಎಫ್ಐ ಮತ್ತು ಕೆಎಫ್ ಡಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಸೆಪ್ಟೆಂಬರ್ 7ರಂದು ಮಂಗಳುರು ಚಲೋ ಬೈಕ್ ಜಾಥಾ ನಡೆಸಲು ಕರೆಕೊಟ್ಟಿದೆ.

ಬಿಜೆಪಿ ಶಾಂತಿ ಹಾಳು ಮಾಡಲು ಹೊರಟಿದೆ: ಯುಟಿ ಖಾದರ್

Advertisement

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ರ್ಯಾಲಿ ನಡೆಸಲು ಅವಕಾಶ ಇದೆ. ಆದರೆ ಮಂಗಳೂರಿನಲ್ಲಿ ಈಗ ಶಾಂತಿ ಇದೆ. ಬಿಜೆಪಿ ಶಾಂತಿಯನ್ನು ಹಾಳು ಮಾಡಲು ಹೊರಟಿದೆ. ಬಿಜೆಪಿ ಬೈಕ್ ಜಾಥಾಕ್ಕೆ ಶಿವಮೊಗ್ಗ, ಚಾರ್ಮಾಡಿ, ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಬರುತ್ತಾರೆ. ಆಗ ಯಾರಾದರು ಕಿಡಿಗೇಡಿಗಳು ಕಲ್ಲುಹೊಡೆದರೆ ಅದರಿಂದ ಗಲಾಟೆ ಪ್ರಾರಂಭವಾಗುತ್ತದೆ. ಬಳಿಕ ಕರ್ಫ್ಯೂ, ಬಂದ್ ಅಂತ ನಡೆಯುತ್ತದೆ ಎಂದು ಸಚಿವ ಯುಟಿ ಖಾದರ್ ಬೆಂಗಳೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next