Advertisement

Tirthahalli: ಗೋ ಕಳ್ಳತನಕ್ಕೆ ವಿರೋಧ- ಕ್ರಮ ಕೈಗೊಳ್ಳುವಂತೆ BJP ಯುವ ಮೋರ್ಚಾ ಮನವಿ

05:19 PM Jan 19, 2024 | Pranav MS |

ತೀರ್ಥಹಳ್ಳಿ : ದಿನಾಂಕ 17-01-2024ರ ಬುಧವಾರ ರಾತ್ರಿ ಸೀಬಿನಕೆರೆ ಸೇರಿದಂತೆ ತೀರ್ಥಹಳ್ಳಿ ನಗರದಾದ್ಯಂತ ದುಷ್ಕರ್ಮಿಗಳು ದನಗಳನ್ನು ತುಂಬಿಕೊಂಡು ಹೋಗಿದ್ದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದುವರೆಗೂ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಆರಕ್ಷಕ ಇಲಾಖೆ ವಿಫಲವಾಗಿದೆ. ಪ್ರಾಣಿ ಹಿಂಸೆಯನ್ನು ವಿರೋಧಿಸಿ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಇಂತಹ ಪೈಶಾಚಿಕ ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ಮನವಿ ಸಲ್ಲಿಸಲಾಯಿತು.

Advertisement

ತೀರ್ಥಹಳ್ಳಿಯಲ್ಲಿ ಪದೇ ಪದೇ ಇಂತಹ ಗೋವು ಕಳ್ಳತನದಂತಹ ಘಟನೆಗಳು ನಡೆಯುತ್ತಿರುವುದರಿಂದ ಸಮಾಜದಲ್ಲಿ ಸೌಹಾರ್ದ ಮತ್ತು ಶಾಂತಿಯ ವಾತಾವರಣ ನೆಲೆಸಲು ಕಷ್ಟವಾಗುತ್ತದೆ. ಅಲ್ಲದೇ ಗೋವು ಕಳ್ಳರು ಮಾರಕಾಸ್ತ್ರಗಳನ್ನು ಹೊಂದಿದ್ದು, ಇದರಿಂದ ಗೋವು ಕಳ್ಳತನ ತಡೆಯಲು ಸಾರ್ವಜನಿಕರು ಭಯಭೀತರಾಗಿದ್ದಾರೆ. ಆದ್ದರಿಂದ ಈ ಕೂಡಲೇ ಸಂಬಂದಿಸಿದ ಇಲಾಖೆ ಮತ್ತು ಸರ್ಕಾರದ ನೇತೃತ್ವವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಗೋವು ಕಳ್ಳರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next