Advertisement

ಬಿಜೆಪಿ ಕಾರ್ಯಕರ್ತರ ಸಭೆ

03:00 PM Apr 02, 2019 | pallavi |
ಎಡಪದವು: ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಅಂಗವಾಗಿ ಬಿಜೆಪಿ ಕಾರ್ಯಕರ್ತರ ಸಭೆ ಕುಪ್ಪೆಪದವು ಭಾಗದ ಕುಳವೂರು ಪರಿಸರದಲ್ಲಿ ಶಾಸಕ ಡಾ| ಭರತ್‌ ಶೆಟ್ಟಿ ಅವರ ನೇತೃತ್ವದಲ್ಲಿ ಜರಗಿತು.
ಈ ಸಂದ ರ್ಭ ಭರತ್‌ ಶೆಟ್ಟಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಮಹತ್ತರವಾದ ಪಾತ್ರದ ಕುರಿತು ವಿವರಿಸಿದರು. ಕಾರ್ಯಕರ್ತರು ತಮ್ಮ ಹೆಚ್ಚಿನ ಸಮಯ ನೀಡುವ ಮೂಲಕ ನಮ್ಮ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರನ್ನು ಅಭೂತಪೂರ್ವವಾಗಿ ವಿಜಯಗೊಳಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಬಳಿಕ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಜನಾರ್ದನ ಗೌಡ, ಪಕ್ಷದ ಪ್ರಮುಖರಾದ ಸತೀಶ್‌ ಬಲ್ಲಾಜೆ, ಅಜಯ್‌ ಅರಂದಾಡಿ, ನಾಗೇಶ್‌ ಶೆಟ್ಟಿ ಮುತ್ತೂರು, ಪ್ರವೀಣ್‌ ಆಳ್ವ, ಸಂತೋಷ್‌ ಉಪಸ್ಥಿತರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next