Advertisement

ಬಿಜೆಪಿ v/s ಕಾಂಗ್ರೆಸ್‌: ಮಂಗಳೂರು ಪಾಲಿಕೆಯಲ್ಲಿ ತಳ್ಳಾಟ 

01:07 PM Oct 31, 2017 | Team Udayavani |

ಮಂಗಳೂರು:  ಆಪಾರ್ಟ್‌ಮೆಂಟ್‌ ಕಾವಲುಗಾರನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಮೇಯರ್‌ ಕವಿತಾ ಸನಿಲ್‌ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು  ಮಂಗಳವಾರ ಪಾಲಿಕೆಯ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. 

Advertisement

ರಾಜೀನಾಮೆಗೆ ಪಟ್ಟುಹಿಡಿದು ಬಿಜೆಪಿ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆಗೆ ಕಾಂಗ್ರೆಸ್‌  ಸದಸ್ಯರು ತಿರುಗೇಟು ನೀಡಿ ವಾಗ್ವಾದಕಿದ್ದಿದ್ದಾರೆ. ಈ ವೇಳೆ ಸದಸ್ಯರ ನಡುವೆ ತಳ್ಳಾಟ, ನೂಕಾಟ ನಡೆದಿದೆ. 

ಕಾಂಗ್ರೆಸ್‌ ಸದಸ್ಯ ವಿನಯ್‌ ರಾಜ್‌  ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. 

ಮೇಯರ್‌ ಕವಿತಾ ಸನಿಲ್‌ ಅವರು ಕಣ್ಣೀರಿಟ್ಟು’ನಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ. ನೀವು ನನ್ನನ್ನು ಮೇಯರ್‌ ಆಗಿ ನೋಡದೆ ಓರ್ವ ತಾಯಿ ಆಗಿ ನೋಡಿ. ತಾಕತ್ತಿದ್ದರೆ ದೇವಸ್ಥಾನಕ್ಕೆ ಬಂದು ಆಣೆ ಮಾಡಿ’ ಎಂದು ಸವಾಲು ಹಾಕಿದರು.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next