Advertisement

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ

01:44 AM Oct 26, 2024 | Team Udayavani |

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಆಹಾರ ಬೆಲೆ ಏರಿಕೆಯಾಗಿರುವುದಕ್ಕೆ ಬಿಜೆಪಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಅವರು, ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ರಾಜ್ಯದಲ್ಲಿದ್ದ ಸರಕಾರ  ವನ್ನು ಪತನಗೊಳಿಸಿದವು. ವಿವಿಧ ವಸ್ತುಗಳ ಬೆಲೆ ಏರಿಕೆ ಯಾಗುವ ಮೂಲಕ ಟ್ರಿಪಲ್‌ ಎಂಜಿನ್‌ಸರಕಾರ ಜನರ ಆಹಾರವನ್ನೇ ಕಸಿಯುತ್ತಿದೆ. ಟೊಮೇಟೊ ಬೆಲೆ ಶೇ.247, ಬೆಳ್ಳುಳ್ಳಿ ಬೆಲೆ ಶೇ.128, ಸರಾಸರಿ ತರಕಾರಿ ಬೆಲೆ ಶೇ.89 ಏರಿಕೆಯಾಗಿದೆ. ಅಡುಗೆ ಎಣ್ಣೆ, ಉಪ್ಪು, ಹಿಟ್ಟಿನ ಬೆಲೆಯೂ ಶೇ.18 ಏರಿಕೆಯಾಗಿದೆ. ಈಗ ಬಿಜೆಪಿಗೆ ವಿದಾಯ ಹೇಳಬೇಕಿದೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next