Advertisement

ಹಣಬಲದಿಂದ ಸರ್ಕಾರಗಳನ್ನು ಬಿಜೆಪಿ ಉರುಳಿಸುತ್ತಿದೆ: ರಾಹುಲ್‌

11:41 PM Jul 12, 2019 | Team Udayavani |

ಅಹಮದಾಬಾದ್‌: ಬಿಜೆಪಿ ತನ್ನ ಹಣ ಬಲದಿಂದ ಸರ್ಕಾರಗಳನ್ನು ಉರುಳಿಸುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಇದನ್ನೇ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅಹಮದಾಬಾದ್‌ನಲ್ಲಿ ಮಾತನಾಡಿದ ಅವರು, ಸಾಧ್ಯವಾದಲ್ಲೆಲ್ಲ ಬಿಜೆಪಿ ಹಣ ಬಲ ಮತ್ತು ಬೆದರಿಕೆಯನ್ನು ಬಳಸಿ ಈ ಕೆಲಸ ಮಾಡುತ್ತಿದೆ.

Advertisement

ಗೋವಾದಿಂದ ಇದು ಶುರುವಾಯಿತು. ನಂತರ ಈಶಾನ್ಯ ರಾಜ್ಯಗಳಿಗೂ ಹರಡಿತು. ಈಗ ಕರ್ನಾಟಕದಲ್ಲಿ ನಡೆಯುತ್ತಿದೆ. ಇದು ಅವರ ಕೆಲಸದ ವಿಧಾನ. ಅವರ ಬಳಿ ಹಣ, ಅಧಿಕಾರವಿದೆ. ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದಾರೆ.

ದೇಶದಲ್ಲಿ ಬೆದರಿಸುವ ಮತ್ತು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಆದರೆ, ಇದಕ್ಕೆ ನಾನು ಹೆದರುವುದಿಲ್ಲ. ನಾನು ಎದೆಯೊಡ್ಡಿ ಇದನ್ನು ಎದುರಿಸುತ್ತೇನೆ. ಇದು ಸಂವಿಧಾನ ರಕ್ಷಣೆಗಾಗಿ, ದೇಶದ ಭವಿಷ್ಯದ ರಕ್ಷಣೆಗಾಗಿ, ದೌರ್ಜನ್ಯ ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂದು ರಾಹುಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next