Advertisement

ವಿಪಕ್ಷಕ್ಕೆ ತಿರುಗೇಟು; ಜ.5ರಿಂದ ದೇಶಾದ್ಯಂತ CAA ಬೆಂಬಲಿಸಿ ಬಿಜೆಪಿಯಿಂದ ಪ್ರಚಾರಾಂದೋಲನ

09:48 AM Dec 29, 2019 | Nagendra Trasi |

ನವದೆಹಲಿ:  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆ ಮುಂದುವರಿದಿದ್ದು, ಮತ್ತೊಂದೆಡೆ ಭಾರತೀಯ ಜನತಾ ಪಕ್ಷದ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಭಿಯಾನ ಜನವರಿ 5ರಿಂದ ಆರಂಭಗೊಂಡು 15ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದೆ.

Advertisement

ಸಿಎಎ ಕುರಿತು ಅರಿವು ಮೂಡಿಸುವ ಪ್ರಚಾರಾಂದೋಲನದಲ್ಲಿ ಮೂರು ಕೋಟಿ ಕುಟುಂಬಗಳನ್ನು ತಲುಪುವ ಗುರಿಯನ್ನು ಬಿಜೆಪಿ ಸರ್ಕಾರ ಹೊಂದಿದ್ದು, ಈ ಅರಿವು ಮೂಡಿಸುವ ಆಂದೋಲನದಲ್ಲಿ ಬಿಜೆಪಿ ಜತೆ ಆರ್ ಎಸ್ ಎಸ್ ಕೈಜೋಡಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಸಿಎಎ ಪರವಾಗಿ ಸುಮಾರು ಒಂದು ಕೋಟಿ ಜನರು ಬೆಂಬಲ ನೀಡುವ ಗುರಿಯನ್ನು ಬಿಜೆಪಿ ಹೊಂದಿದೆ.

ಸಿಎಎ ಪ್ರಚಾರಾಂದೋಲನದಲ್ಲಿ ಗುರಿ ಸಾಧಿಸಿದ ನಂತರ ಭಾರತೀಯ ಜನತಾ ಪಕ್ಷ ಸಾರ್ವಜನಿಕ ಸಂವಹನಕ್ಕಾಗಿ ವಿವಿಧ ಗುಂಪನ್ನು ರಚಿಸುವ ಗುರಿ ಹೊಂದಿದ್ದು, ಈ ಮೂಲಕ ಬೌದ್ಧರು, ದಲಿತರು ಹಾಗೂ ಅಲ್ಪಸಂಖ್ಯಾಕ ಸಮುದಾಯವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಈ ಗುಂಪು ಕಾರ್ಯನಿರ್ವಹಿಸಲಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next