Advertisement

ಮಂಜೇಶ್ವರ: ಉಪಚುನಾವಣೆಗೆ ಸಜ್ಜಾಗಲು ಬಿ.ಜೆ.ಪಿ. ಕಾರ್ಯಕರ್ತರಿಗೆ ಕರೆ

08:43 PM Jun 27, 2019 | Team Udayavani |

ಕುಂಬಳೆ: ಮಂಗಲ್ಪಾಡಿ ಏಕಾಹ ಭಜನ ಮಂದಿರದಲ್ಲಿ ನಡೆದ ಬಿ.ಜೆ.ಪಿ. ವಿಶೇಷ ಆಮಂತ್ರಿತ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ದೇಶೀಯ ನಿರ್ವಾಹಕ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್‌ ಭಾಗವಹಿಸಿ ಮಾತನಾಡಿ ಮುಂದಿನ ಮಂಜೇಶ್ವರ ವಿಧಾನಸಭಾ ಉಪಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

ಬಿ.ಜೆ.ಪಿ. ಮಂಜೇಶ್ವರ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು.

ಬಿ.ಜೆ.ಪಿ. ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್‌, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ,ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ನಾಯಕರಾದ ಕುಂಟಾರು ರವೀಶ ತಂತ್ರಿ, ಪಿ. ಸುರೇಶ್‌ ಕುಮಾರ್‌ ಶೆಟ್ಟಿ, ಎ.ಕೆ. ಕಯ್ನಾರ್‌, ಪಿ. ರಮೇಶ್‌, ಎಂ. ಹರಿಶ್ಚಂದ್ರ ಮಂಜೇಶ್ವರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next