Advertisement

ವಿಶ್ವಕರ್ಮ ಸಮುದಾಯ ಇನ್ನು ಬಿಜೆಪಿ ಬೆನ್ನಿಗೆ: ಕೆ.ಪಿ ನಂಜುಂಡಿ

08:00 AM Jul 24, 2017 | |

ಬೆಂಗಳೂರು: ಇಷ್ಟು ದಿನ ಕಾಂಗ್ರೆಸ್‌ ಜತೆಗಿದ್ದ ವಿಶ್ವಕರ್ಮ ಸಮುದಾಯ ಇನ್ನು ಮುಂದೆ ಬಿಜೆಪಿ ಬೆನ್ನಿಗೆ ನಿಲ್ಲಲಿದೆ
ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ ನಂಜುಂಡಿ ಹೇಳಿದ್ದಾರೆ.

Advertisement

ವಿಶ್ವಕರ್ಮ ಮಹಾಸಭಾ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿ ಬಿಜೆಪಿಯ ರಾಜ್ಯ ನಾಯಕರಿಗೆ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ದಲ್ಲಿ ಅವರು ಈ ವಿಷಯ ತಿಳಿಸಿದರು.

ಕೆ.ಪಿ ನಂಜುಂಡಿ ಮಾತನಾಡಿ, “ರಾಜ್ಯದಲ್ಲಿ ಸಮಾಜದ ಜನಸಂಖ್ಯೆ 30ರಿಂದ 35 ಲಕ್ಷದಷ್ಟಿದ್ದು, ಶೇ.80 ರಷ್ಟು
ಜನ ಈಗ ಬಿಜೆಪಿಯ ಜತೆಗಿದ್ದಾರೆ. ಚುನಾವಣೆ ಒಳಗಾಗಿ ಉಳಿದ ಶೇ.20 ರಷ್ಟು ಜನರನ್ನು ಬಿಜೆಪಿಗೆ ಕರೆ ತರುತ್ತೇನೆ. ಆ ನಿಟ್ಟಿನಲ್ಲಿ 30 ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಜತೆಗೆ ಇತರೆ ಎಲ್ಲ ಹಿಂದುಳಿದ ವರ್ಗದವರನ್ನು ಕರೆತರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next