Advertisement

ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಬಿಜೆಪಿ ತಂಡ

11:21 PM Aug 10, 2019 | Lakshmi GovindaRaj |

ಬೆಂಗಳೂರು: ರಾಜ್ಯ ಬಿಜೆಪಿಯಿಂದ ಪ್ರವಾಹ ಹಾಗೂ ಮಳೆಹಾನಿಯ ಕುರಿತು ಜಿಲ್ಲಾಮಟ್ಟದಿಂದ ವರದಿ ಪಡೆಯಲು ಪ್ರಮುಖರ ತಂಡವನ್ನು ರಚಿಸಿದೆ. ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಹ, ಭೀಕರ ಮಳೆಹಾನಿಯ ಅಧ್ಯಯನಕ್ಕಾಗಿ ಮಾಜಿ ಸಚಿವರಾದ ಶ್ರೀರಾಮುಲು, ಶಿವನಗೌಡ ನಾಯಕ್‌, ಸಂಸದ ರಾಜ ಅಮರೇಶ್‌ ನಾಯಕ್‌, ಶಾಸಕರಾದ ಡಾ.ಶಿವರಾಜ ಪಾಟೀಲ್‌, ಎಂ.ಎಸ್‌.ಸೋಮಲಿಂಗಪ್ಪ, ಜಿ.ಸೋಮಶೇಖರ ರೆಡ್ಡಿ ಹಾಗೂ ವೈ.ಎನ್‌.ಗೋಪಾಲಕೃಷ್ಣ ತಂಡ. ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗೆ ಸಂಸದರಾದ ಡಾ.ಉಮೇಶ್‌ ಜಾಧವ್‌,

Advertisement

ರಾಜ ಅಮರೇಶ್‌ ನಾಯಕ್‌, ಶಾಸಕರಾದ ದತ್ತಾತ್ರೇಯ ಪಾಟೀಲ್‌ ರೇವೂರ, ರಾಜಕುಮಾರ್‌ ಪಾಟೀಲ್‌ ತೇಲ್ಕೂರು, ಬಸವರಾಜ ಮಟ್ಟಿಮೋಡ, ಸುಭಾಷ್‌ ಗುತ್ತೇದಾರ್‌, ಅವಿನಾಶ್‌ ಜಾಧವ್‌, ನರಸಿಂಹ ನಾಯಕ್‌, ವೆಂಕಟರೆಡ್ಡಿ ಮುದ್ನಾಳ್‌ ತಂಡ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗೆ ಸಂಸದ ಪ್ರತಾಪಸಿಂಹ, ಮಾಜಿ ಸಚಿವ ರಾಮದಾಸ್‌, ಶಾಸಕರಾದ ನಾಗೇಂದ್ರ, ನಿರಂಜನ್‌ ಕುಮಾರ್‌, ರಾಜೇಂದ್ರ ಮೊದಲಾದವರ ತಂಡ ಸಮೀಕ್ಷೆ ನಡೆಸಿ ರಾಜ್ಯ ಬಿಜೆಪಿಗೆ ವರದಿ ಒಪ್ಪಿಸಲಿದೆ ಎಂದು ಬಿಜೆಪಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next