Advertisement

ಬಿಜೆಪಿ-ಟಿಡಿಪಿ ನಡುವೆ ಬಿರುಕು?

10:04 AM Jan 28, 2018 | |

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಬಿಜೆಪಿ ಮತ್ತು ಟಿಡಿಪಿ  ನಡುವೆ ಬಿರುಕಿನ ರೇಖೆಗಳು ಗೋಚರಿಸಿದಂತೆ ಕಾಣಿಸುತ್ತಿವೆ. ಬಿಜೆಪಿಗೆ ಅಗತ್ಯವಿಲ್ಲದೇ ಇದ್ದರೆ ಪ್ರತ್ಯೇಕವಾಗಿರಲು ಸಿದ್ಧ ಎಂದು ಸಿಎಂ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ಬಿಜೆಪಿ ಜತೆ ಮಿತ್ರಧರ್ಮ ಪಾಲನೆ ಮಾಡುತ್ತಿದ್ದೇವೆ. ಅವರಿಗೆ ಮೈತ್ರಿ ಮುಂದುವರಿಸಿಕೊಂಡು ಹೋಗಲು ಇಚ್ಛೆ ಇಲ್ಲದಿದ್ದಲ್ಲಿ ಪ್ರತ್ಯೇಕವಾಗಿರುತ್ತೇವೆ ಎಂದಿದ್ದಾರೆ.

Advertisement

ಕೆಲ ದಿನಗಳ ಹಿಂದೆ ವೈ.ಎಸ್‌.ಆರ್‌.ಕಾಂಗ್ರೆಸ್‌ ಅಧ್ಯಕ್ಷ ಜಗನ್ಮೋಹನ ರೆಡ್ಡಿ 2019ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಕೈಜೋಡಿಸಲು ಸಿದ್ಧ ಎಂದು ಹೇಳಿದ್ದರು. ಹೀಗಾಗಿ ನಾಯ್ಡು ಹೇಳಿಕೆ ಮಹತ್ವ ಪಡೆದಿದೆ. ಇತ್ತೀಚೆಗೆ ಆಂಧ್ರ ಬಿಜೆಪಿ ನಾಯಕರು ತಮ್ಮ ಸರ್ಕಾರದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯ ಬೇಸರ ತಂದಿದೆ ಎಂದಿರುವ ನಾಯ್ಡು, ತೆಲಂಗಾಣ ಪ್ರತ್ಯೇಕವಾದ ಬಳಿಕ ಆಂಧ್ರಕ್ಕೇಕೆ ವಿಶೇಷ ಸ್ಥಾನಮಾನ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next