Advertisement

ಬೇವಿನಹಳ್ಳಿ ಗ್ರಾಪಂ ಬಿಜೆಪಿ ಬೆಂಬಲಿತರ ವಶ

02:47 PM Feb 11, 2021 | Team Udayavani |

ಗೌರಿಬಿದನೂರು: ಗ್ರಾಪಂ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಗೆದ್ದಿದ್ದು ತಾಲೂಕಿನ ತೊಂಡೇಬಾವಿ ಹೋಬಳಿ ಬೇವಿನಹಳ್ಳಿ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಆಯ್ಕೆಯಾಗಿರುವುದು ಮುಂಬರುವ ತಾಪಂ, ಜಿಪಂ ಸೇರಿದಂತೆ ಎಲ್ಲಾ ಚುನಾವಣೆಯಲ್ಲಿ ಗೆಲ್ಲುವ ಮುನ್ಸೂಚನೆ ಎಂದು ಬಿಜೆಪಿ ಪರಿಶಿಷ್ಟ ವರ್ಗಗಳ ವಿಭಾಗದ ಮುಖಂಡ ಬಿ.ವಿ.ಗೋಪಿನಾಥ್‌ ತಿಳಿಸಿದರು.

Advertisement

ಬೇವಿನಹಳ್ಳಿ ಗ್ರಾಪಂಗೆ ಬಿಜೆಪಿಯಿಂದ ಅಧ್ಯಕ್ಷರಾಗಿ ಶಿವಾಜಿರಾವ್‌ \ಆಯ್ಕೆಯಾಗಿದ್ದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ರಾಜ್ಯದ ಯಡಿಯೂರಪ್ಪ ನೇತೃತ್ವದ ಸರ್ಕಾರಗಳ ದಲಿತ ಹಾಗೂ ಹಿಂದುಳಿದವರ ಪರವಾದ ಯೋಜನೆಗಳೇ ಕಾರಣ ಎಂದರು.

ತಾಲೂಕಿನಲ್ಲಿ ಮಾಜಿ ಶಾಸಕರಾದ ಎನ್‌. ಜ್ಯೋತಿರೆಡ್ಡಿ ಹಾಗೂ ಬಿಜೆಪಿ ರಾಜ್ಯ ಮುಖಂಡರಾದ ಎನ್‌. ಎಂ.ರವಿನಾರಾಯಣರೆಡ್ಡಿ ಅವರ ನೇತೃತ್ವದಲ್ಲಿ ಉತ್ತಮ ಫ‌ಲಿತಾಂಶ ಬಂದಿದೆ ಎಂದರು. ಪಂಚಾಯ್ತಿ ಮುಖಂಡರಾದ ನಿಜಲಿಂಗಪ್ಪ, ಉಮಾಶಂಕರ್‌, ಪೆರುಮಾಲ್‌, ನಾಗರಾಜ್‌, ಮಹದೇವ್‌, ಶ್ರೀರಾಮಪ್ಪ, ಚಂದ್ರಶೇಖರ್‌ ಸ್ವಾಮಿ, ಕಾಮಗಾನಹಳ್ಳಿ ಮಲ್ಲೇಶ್‌, ಚಿಕ್ಕ ಮಲ್ಲೇಕೆರೆ ನಾಗರಾಜ್‌, ಬಸವನಹಳ್ಳಿ ಸೋಮೇಶಪ್ಪ, ದೊಡ್ಡ ಮಲ್ಲೆಕೆರೆ ವಿಜಯಕುಮಾರ್‌, ನರಸಿಂಹರೆಡ್ಡಿ ಬಸವನಹಳ್ಳಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next