Advertisement

ವಿಧಾನಸಭೆ ಅಧಿವೇಶನವನ್ನು ಹಾಳುಗೆಡವಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

01:18 PM Feb 28, 2022 | Team Udayavani |

ಗಂಗಾವತಿ: ವಿಧಾನಸಭೆಯ ಅಧಿವೇಶನವನ್ನು ಹಾಳುಗೆಡವಿ  ದ ಕಾಂಗ್ರೆಸ್ ಮುಖಂಡರ ವರ್ತನೆಯನ್ನು ಖಂಡಿಸಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ ,ಡಿಕೆಶಿ ಮತ್ತು ಬಿ.ಕೆ.ಹರಿಪ್ರಸಾದ್ ವಿರುದ್ಧ ಘೋಷಣೆ ಕೂಗಿದರು .

Advertisement

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ , ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೆ. ಎಸ್ .ಈಶ್ವರಪ್ಪ ವಿರುದ್ಧ ಹಾಗೂ ಇಸಾಕ್ ಘಟನೆ ಕುರಿತಂತೆ ಕಾಂಗ್ರೆಸ್ ಸ್ಪಷ್ಟ ನಿಲುವು ಇಲ್ಲದೆ ವಿಧಾನಸಭೆಯ ಅಧಿವೇಶನದ ಒಳಗಡೆ ಮತ್ತು ಹೊರಗಡೆ ಹೋರಾಟ ಮಾಡುತ್ತಿದ್ದು ಇದರಿಂದ ಕೋಟ್ಯಂತರ ರೂ.ಹಾನಿಯಾಗಿದೆ .ಕಾಂಗ್ರೆಸ್ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಜಮ್ ಹೋರಾಟ ದೂರವಾಗಿದ್ದು ಶಿವಮೊಗ್ಗದಲ್ಲಿ ಹರ್ಷನ ಕೊಲೆಮಾಡಿದ ಗೂಂಡಾಗಳನ್ನು ಕಾಂಗ್ರೆಸ್ ನವರು ಬೆಂಬಲಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ .ಮೇಕೆದಾಟು ಮತ್ತು ವಿಧಾನಸಭೆ ಅಧಿವೇಶನದಲ್ಲಿ ಹೋರಾಟ ಮಾಡುವ ಕಾಂಗ್ರೆಸ್ ಮುಖಂಡರಿಗೆ ಶಿವಮೊಗ್ಗದ ಹರ್ಷೆ ಕೊಲೆ ಘಟನೆ ಕುರಿತು ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಮನಸ್ಸಿಲ್ಲ ಇದರಿಂದ ಗೊತ್ತಾಗುತ್ತದೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಮುಸಲ್ಮಾನ್ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಕಾರ್ಯ ಮುಗ್ಧರಾಗಿದ್ದು ಹಿಂದೂಗಳ ಜೀವಕ್ಕೆ ಅವರು ಬೆಲೆ ಕೊಡುವುದಿಲ್ಲ .ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ ರಾಜ್ಯದ ಜನರು ಕಾಂಗ್ರೆಸ್ ನನಗೆ ಬುದ್ಧಿ ಕಲಿಸುತ್ತಾರೆ. ಮಾರ್ಚ್ 04  ರಿಂದ  ಆರಂಭವಾಗುವ ಬಜೆಟ್ ವಿಧಾನಸಭೆ ಅಧಿವೇಶನ ಹಾಳುಗೆಡವದೆ ಸರ್ಕಾರದ ಜತೆ ಕೈಜೋಡಿಸಿ ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕರು ಒತ್ತಾಯಿಸಿದರು .

ಕಾಡಾ ಅಧ್ಯಕ್ಷ ನಗರದ ತಿಪ್ಪೇರುದ್ರ ಸ್ವಾಮಿ ಮಾಜಿ ಅಧ್ಯಕ್ಷ ಎಚ್ ಗಿರೇಗೌಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಮಯ್ಯ ಸ್ವಾಮಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಮಹಿಳಾ ಮುಖಂಡರು ಇದ್ದರು .

Advertisement

Udayavani is now on Telegram. Click here to join our channel and stay updated with the latest news.

Next