Advertisement

ಚುನಾವಣೆ ಹೊಸ್ತಿಲಲ್ಲಿ ಚಾಣಕ್ಯನ ಭೇಟಿ

01:51 AM Feb 11, 2023 | Team Udayavani |

ಪುತ್ತೂರು: ಬಿಜೆಪಿಯ ಚುನಾವಣ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ತೂರು ಭೇಟಿಯ ಹಿಂದೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆಯ ಕಹಳೆ ಊದುವ ತಂತ್ರಗಾರಿಕೆ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಕೃಷಿ ವರ್ಗ, ಹಿಂದುತ್ವದ ಆಧಾರದಲ್ಲಿ ಮತ ಸೆಳೆಯಲು ಬಿಜೆಪಿಯ ಶಕ್ತಿ ಕೇಂದ್ರ ಎನಿಸಿರುವ ಕರಾವಳಿಯಲ್ಲೇ ತಂತ್ರಗಾರಿಕೆ ಹೆಣೆಯುವ ಲೆಕ್ಕಾಚಾರದಿಂದಲೇ ಈ ಭೇಟಿ ನಿಗದಿಪಡಿಸಲಾಗಿದೆ. ಸಹಕಾರ ಮತ್ತು ಅಡಿಕೆ ಬೆಳೆಗಾರರ ಸಮಾವೇಶ ರಾಜಕೀಯ ರಹಿತ ಎಂದು ಬಿಂಬಿಸಲಾಗಿದ್ದರೂ ಅಮಿತ್‌ ಶಾ ಭೇಟಿ ಬಿಜೆಪಿ ಸಂಘಟನೆಗೆ ಶಕ್ತಿ ತುಂಬುವ ಉದ್ದೇಶವೇ ಎಂದು ಹೇಳಲಾಗುತ್ತಿದೆ.

ಕರಾವಳಿಯ ಆರ್ಥಿಕ ಬೆನ್ನೆಲುಬು ಅಡಿಕೆ ಬೆಳೆಗಾರರು. ಇಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಡಿಕೆ ಕೃಷಿಕರಿದ್ದಾರೆ.

ಹೀಗಾಗಿ ಸುವರ್ಣ ಮಹೋತ್ಸವ ಬಿಜೆಪಿ ಪಾಲಿಗೆ ಕೃಷಿಕರನ್ನು ಸೆಳೆಯುವ ವೇದಿಕೆಯೂ ಆಗಬಹುದು. ಅಡಿಕೆ ಬೆಳೆಗಾರರ ಬಹು ಬೇಡಿಕೆ ಆಗಿರುವ ಅಡಿಕೆ ಕನಿಷ್ಠ ಆಮದು ಸುಂಕ ಏರಿಸಬೇಕೆಂಬ ಬೇಡಿಕೆಯನ್ನು ಸಮಾವೇಶದಲ್ಲಿ ಗೃಹ ಸಚಿವರು ಈಡೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಡಿಕೆ ಕೃಷಿಗೆ ಭವಿಷ್ಯ ಇಲ್ಲ ಎಂಬರ್ಥದಲ್ಲಿ ರಾಜ್ಯ ಗೃಹ ಸಚಿವರು ಆಡಿದ ಮಾತಿನಿಂದ ಉಂಟಾಗಿರುವ ಹಾನಿಯನ್ನು ಸರಿ ಪಡಿಸುವ ಅನಿವಾರ್ಯವೂ ಬಿಜೆಪಿಗೆ ಇದೆ. ಹಾಗಾಗಿ ಬೆಳೆ ಗಾರರ ಒಲವು ಗಳಿಸಲು ಹೊಸ ಯೋಜನೆಗಳನ್ನು ಪ್ರಕಟಿ ಸುವ ಸಾಧ್ಯತೆಯೂ ಇದೆ. ದಶಕಗಳಿಂದ ಅಡಿಕೆ ಬೆಳೆಗಾರರನ್ನು ಕಾಡು ತ್ತಿರುವ ಸಮಸ್ಯೆಗಳನ್ನು ಶಾ ಮುಂದಿರಿಸಿ ಬಿಜೆಪಿಯು ರೈತ ಪರ ವಾಗಿದೆ ಎನ್ನುವ ಸಂದೇಶ ರವಾನಿಸುವ ಪ್ರಯತ್ನವೂ ಇದೆ.

Advertisement

ಹಿಂದುತ್ವ ಡ್ಯಾಮೇಜ್‌ ಕಂಟ್ರೋಲ್‌
ಕರಾವಳಿಯಲ್ಲಿ ಬಿಜೆಪಿ ಗೆಲುವಿನ ಪ್ರಮುಖ ಅಸ್ತ್ರ ಹಿಂದುತ್ವ. ಇತ್ತೀಚೆಗಿನ ಕೆಲವು ವರ್ಷಗಳಿಂದ ಸಂಘ ಪರಿವಾರ ಹಾಗೂ ಬಿಜೆಪಿ ಮಧ್ಯೆ ಸಂಬಂಧ ಹಿಂದಿನಂತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಸಂಘ ಪರಿವಾರದ ಪ್ರಮುಖ ನಾಯಕರು ಬಿಜೆಪಿ ವಿರುದ್ಧ ಧ್ವನಿ ಎತ್ತುತ್ತಿರುವುದು, ಪ್ರವೀಣ್‌ ನೆಟ್ಟಾರು ಹತ್ಯೆ ವೇಳೆ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರ ಬಹಿರಂಗ ಆಕ್ರೋಶ, ಸಂಘ ಪರಿವಾರದವರಿಗೆ ಟಿಕೆಟ್‌ ನೀಡಬೇಕೆಂಬ ಒತ್ತಡ ಹೆಚ್ಚು ತ್ತಿರುವುದು- ಇವೆಲ್ಲ ಬೆಳವಣಿಗೆಗಳಿಗೆ ಪರಿಹಾರ ಹುಡುಕ ಬೇಕಿದೆ. ಕರಾವಳಿಯಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಕಳೆದು ಕೊಳ್ಳದಂತೆ ಪರಿಸ್ಥಿತಿ ನಿರ್ವಹಿಸುವಲ್ಲಿ ಅಮಿತ್‌ ಶಾ ಭೇಟಿ ಮಹತ್ವ ಪಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಾತಿ ಲೆಕ್ಕಾಚಾರ
ಹಿಂದುತ್ವದ ಆಧಾರದಲ್ಲಿಯೇ ಬಿಜೆಪಿಯ ಚುನಾವಣೆ ಲೆಕ್ಕಾಚಾರ ನಡೆಯುತ್ತಿದ್ದ ಕರಾವಳಿಯಲ್ಲಿ ಈ ಬಾರಿ ಜಾತಿ ಅಸ್ತ್ರವೂ ಮುನ್ನೆಲೆಗೆ ಬರುತ್ತಿದೆ. ಪ್ರಬಲ ಸಮುದಾಯಗಳು ಬೇರೆಬೇರೆ ರೂಪದಲ್ಲಿ ಶಕ್ತಿ ಪ್ರದರ್ಶನ ನಡೆಸಿರುವುದೂ ಬಿಜೆಪಿ ಗಮನಿಸಿದೆ. ಜಾತಿ ಬಲ ಆಧಾರಿತವಾಗಿ ಅಭ್ಯರ್ಥಿಗಳ ಆಯ್ಕೆಗೆ ಒತ್ತಡ ಬಂದರೆ ಏನು ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಮುಳುಗಿದೆ. ಇಂತಹ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಮಿತ್‌ ಶಾ ಬಿಜೆಪಿ ನಾಯಕರಿಗೆ ಮಾರ್ಗದರ್ಶನ ನೀಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next