Advertisement

BJP ತೊರೆದು SP ಸೇರಿದ ಶ್ಯಾಮ್‌ ಚರಣ್‌ ಗುಪ್ತ: ಬಂಡಾದಿಂದ ಸ್ಪರ್ಧೆ

11:14 AM Mar 16, 2019 | Team Udayavani |

ಲಕ್ನೋ : ಬಿಜೆಪಿ ಸಂಸದ ಶ್ಯಾಮ್‌ ಪ್ರಸಾದ್‌ ಚರಣ್‌ ತಮ್ಮ ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷ ಸೇರಿದ್ದಾರೆ. ಎಸ್‌ಪಿ ಟಿಕೆಟ್‌ನಲ್ಲಿ ಅವರು ಉತ್ತರ ಪ್ರದೇಶದ ಬಂಡಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.

Advertisement

ಸಮಾಜವಾದಿ ಪಕ್ಷದ ನೇತೃತ್ವ ವಹಿಸಿರುವ ಅಖೀಲೇಶ್‌ ಯಾದವ್‌ ಅವರು ಈ ತನಕ ತಮ್ಮ ಪಕ್ಷದ ಅಭ್ಯರ್ಥಿಗಳ ಆರು ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ನಾಲ್ಕನೇ ಪಟ್ಟಿಯಲ್ಲಿ ಓರ್ವ ಅಭ್ಯರ್ಥಿಯ ಹೆಸರಿದ್ದು ರತಿರಾಮ್‌ ಬನ್ಸಾಲ್‌ ಅವರು ತಿಕಾಮ್‌ಗಢ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 

ಐದನೇ ಪಟ್ಟಿಯಲ್ಲಿ ನಾಲ್ವರು ಅಭ್ಯರ್ಥಿಗಳಿದ್ದರು. ಅವೆಂದರೆ ವಿನೋದ್‌ ಕುಮಾರ್‌ ಅಲಿಯಾಸ್‌ ಪಂಡಿತ್‌ ಸಿಂಗ್‌ (ಗೊಂಡಾ), ರಾಮ ಸಾಗರ್‌ ರಾವತ್‌ (ಬಾರಾಬಂಕಿ) ಮತ್ತು ಸಫೀಕುರ್‌ ರೆಹಮಾನ್‌ ಬಾರ್ಕ್‌ (ಸಂಭಾಲ್‌), ಹಾಲಿ ಆರ್‌ಎಲ್‌ಡಿ ಸಂಸದೆ ತಬಸ್ಸಂ ಹಸನ್‌ ಅವರು ಕೈರಾನಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next