Advertisement

ಅನೈತಿಕ ಸಂಬಂಧ: ಮಹಾರಾಷ್ಟ್ರ ಬಿಜೆಪಿ ಶಾಸಕರ ಬಾಡಿಗಾರ್ಡ್‌ ಆತ್ಮಹತ್ಯೆ

12:13 PM Jun 23, 2017 | Team Udayavani |

ಮುಂಬಯಿ : ಮಹಾರಾಷ್ಟ್ರದ ನಕ್ಸಲ್‌ ಪೀಡಿತ ಗಡ್‌ಚಿರೋಲಿ ಜಿಲ್ಲೆಯ ಬಿಜೆಪಿ ಶಾಸಕರೋರ್ವರ ಬಾಡಿಗಾರ್ಡ್‌ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

Advertisement

ಗಡ್‌ಚಿರೋಲಿ ಜಿಲ್ಲೆಯ ಆರ್ಮೋರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಕೃಷ್ಣ  ಗಜಬೆ ಅವರ ವಾರ್ಸಾ ತೆಹಶೀಲ್‌ನಲ್ಲಿರುವ ಕಚೇರಿಯಲ್ಲಿ  ಅವರ ಬಾಡಿಗಾರ್ಡ್‌, 34ರ ಹರೆಯದ ಭಾಸ್ಕರ್‌ ಚೌಕೆ ಪಿಸ್ತೂಲಿನಿಂದ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡನೆಂದು ಗಡ್‌ಚಿರೋಲಿ ಪೊಲೀಸ್‌ ಸುಪರಿಂಟೆಂಡೆಂಟ್‌ ಅಭಿನವ್‌ ದೇಶ್‌ಮುಖ್‌ ತಿಳಿಸಿದ್ದಾರೆ. 

ಬಾಡಿಗಾರ್ಡ್‌ ಭಾಸ್ಕರ್‌ ಚೌಕೆಯ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಉದ್ದೇಶ ಕಾಣುವುದಿಲ್ಲ; ಆತ ಕೌಟುಂಬಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ; ಆತನಿಗೆ ವಿವಾಹಿತ ಮಹಿಳೆಯೊಬ್ಬಳೊಂದಿಗೆ ಅಕ್ರಮ ಸಂಬಂಧ ಇದೆ ಎನ್ನಲಾಗಿದೆ ಎಂದು ಎಸ್‌ಪಿ ದೇಶ್‌ಮುಖ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next