Advertisement

ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರ

07:10 AM Jun 11, 2018 | Team Udayavani |

ಕೊಪ್ಪಳ: ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರವೊಂದು ಬಂದಿದ್ದು, 50 ಲಕ್ಷ ರೂ. ಹಣದ 
ಬೇಡಿಕೆ ಇಡಲಾಗಿದೆ. ಈ ಕುರಿತು ಎಸ್ಪಿ, ಡಿಎಸ್‌ಪಿಗೆ ಶಾಸಕರು ದೂರು ನೀಡಿದ್ದು, ಪೊಲೀಸರು ತನಿಖೆ ಶುರು 
ಮಾಡಿದ್ದಾರೆ. ಜೂ.6ರಂದು ಸಂಜೆ ಮುನವಳ್ಳಿ ನಿವಾಸಕ್ಕೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ವಾಚ್‌ಮನ್‌
ಕೈಯಲ್ಲಿ ಪತ್ರವೊಂದನ್ನಿತ್ತು ತೆರಳಿದ್ದಾರೆ. 

Advertisement

“2014-2018ರ ಚುನಾವಣೆವರೆಗೂ ನಮ್ಮ ಕರೆನ್ಸಿ ಬಳಸಿ ಸರ್ಪೋಟ್‌ ಮಾಡುತ್ತಾ ಸಹಕರಿಸಿದ್ದೀರಿ. ತುಂಬಾ ಥ್ಯಾಂಕ್ಸ್‌. ನೀವು 9-5-2018 ರಂದು 500 ರೂ. ಮುಖಬೆಲೆಯ ಒಂದು ಕೋಟಿ ರೂ. ಹಣ ತೆಗೆದುಕೊಂಡಿದ್ದೀರಿ. ಅದರಲ್ಲಿ ನಮಗೆ 50 ಲಕ್ಷ ನೀಡುತ್ತಿಲ್ಲ. ಫೋನ್‌ ಮಾಡಿದರೂ ರಿಸೀವ್‌ ಮಾಡದೇ ವಂಚಿಸುತ್ತಿದ್ದೀರಿ. ನಿಮಗೆ ಇನ್ನೂ 3-4 ದಿನದಲ್ಲಿ 10 ಲಕ್ಷ ರೂ. ಕರೆನ್ಸಿ ವಿಆರ್‌ಎಲ್‌ ಮೂಲಕ ಕಳಿಸುತ್ತೇವೆ. ಆ ಮೇಲೆ ನಮ್ಮ ಹುಡುಗರು ಬರ್ತಾರೆ. ಆ
ಮೇಲೆ ನಿಮ್ಮಿಷ್ಟ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಅಲ್ಲದೆ, ಜೂ.7ರಂದು ಮುನವಳ್ಳಿಗೆ ಕರೆ ಮಾಡಿ ನಮಗೆ
50 ಲಕ್ಷ ಹಣ ಕೊಡುವುದು ಬಾಕಿಯಿದೆ. ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next