Advertisement

ಬೈ ಎಲೆಕ್ಷನ್‌ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾದ ಇಬ್ಬರ ಹೇಳಿಕೆಗಳು

12:06 PM Nov 15, 2018 | Team Udayavani |

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಗೆ ಪ್ರಮುಖ ಕಾರಣಗಳನ್ನು ಬಿಜೆಪಿ ನಾಯಕರು ಕಂಡುಕೊಂಡಿದ್ದಾರೆ. 

Advertisement

ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಶಾಸಕ ವಿ.ಸೋಮಣ್ಣ ಅವರು ನೀಡಿದ 2 ಹೇಳಿಕೆಗಳು ಪಕ್ಷದ ಸೋಲಿಗೆ ಕಾರಣವಾಗಿದೆ ಎಂದು ಚುನಾವಣಾ ಉಸ್ತುವಾರಿ ಹೊಂದಿದ್ದ ನಾಯಕರ ಬೂತ್‌ ಸಮಿತಿಗಳ ಮತ ವಿಭಜನೆ ಕುರಿತಾಗಿನ ವರದಿ ಆಧರಿಸಿ ಪಕ್ಷದ ನಾಯಕರಿಗೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಜನಾರ್ದನ ರೆಡ್ಡಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗನ ಸಾವಿನ ಕುರಿತಾಗಿ ನೀಡಿದ ಹೇಳಿಕೆಯಿಂದ ಕುರುಬ ಸಮುದಾಯದ ಮತಗಳು ವಿಭಜನೆಯಾಗಿದ್ದರೆ, ವಿ.ಸೋಮಣ್ಣ ಅವರು ಶ್ರೀರಾಮುಲು ಅವರು ಮುಂದಿನ ಮುಖ್ಯಮಂತ್ರಿ ಎಂದ ಹೇಳಿಕೆ ಲಿಂಗಾಯತ ಮತಗಳ ವಿಭಜನೆಗೆ ಕರಾಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next