Advertisement

ಹಲ್ಲೆ ಪ್ರಕರಣ:ಕೊನೆಗೂ ಬಿಜೆಪಿ ಶಾಸಕ ಕಾಗೆ ಸೇರಿ 6 ಮಂದಿ ಬಂಧನ 

08:42 AM Jan 19, 2017 | Team Udayavani |

ಬೆಳಗಾವಿ: ಜಿಲ್ಲೆಯ ಕಾಗವಾಡದಲ್ಲಿ ಜನವರಿ 1 ರಂದು ಕಾಂಗ್ರೆಸ್‌ ಕಾರ್ಯಕರ್ತ ,ಉದ್ಯಮಿ ವಿವೇಕ್‌ ಶೆಟ್ಟಿ ಮೇಲೆ ನಡೆದಿದ್ದ ಮಾರಣಾಂತಿಕ ಗುಂಪು ದಾಳಿಗೆ ಸಂಬಂಧಿಸಿ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ರಾಜು ಕಾಗೆ ಸೇರಿ 6 ಮಂದಿ ಆರೋಪಿಗಳನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

Advertisement

ರಾಜು ಕಾಗೆ ಮತ್ತು 6 ಮಂದಿ ಆರೋಪಿಗಳು ಇದೀಗ ಪೊಲೀಸರ ವಶದಲ್ಲಿದ್ದು ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಇನ್ನೂ ಕೆಲ ಆರೋಪಿಗಳು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಮುಂದುವರೆದಿದಿದೆ. 

ಈಗಾಗಲೇ ಕಾಗೆ ಅವರು ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. 

ಕಾಗೆ ಕುಟುಂಬಸ್ಥರ ಬಗ್ಗೆ ಫೇಸ್‌ಬುಕ್‌ನಲ್ಲಿ ಅಶ್ಲೀಲ ಪ್ರತಿಕ್ರಿಯೆ ಹಾಕಿದ್ದಾರೆಂದು ಕಾಂಗ್ರೆಸ್‌ ಕಾರ್ಯಕರ್ತ ವಿವೇಕ ಶೆಟ್ಟಿ  ಮೇಲೆ ಬೆಳಗಾವಿಯ ಕಾಗೆ ಕುಟುಂಬದ ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ  ಶಾಸಕ ಸೇರಿದಂತೆ 12 ಜನರ ವಿರುದ್ಧ ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಉಗಾರ ಖುರ್ದದ ವಿವೇಕ ಶೆಟ್ಟಿ ಮನೆಯಲ್ಲಿ ಜ.1ರಂದೇ ಹಲ್ಲೆ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next