Advertisement

“ಬಿಜೆಪಿ ನಾಯಕರು ಉತ್ತರಕುಮಾರರು!’

11:49 PM Sep 21, 2019 | Team Udayavani |

ಬೆಂಗಳೂರು: ನೆರೆ ಹಾಗೂ ಬರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗದ ರಾಜ್ಯ ಬಿಜೆಪಿ ಸರ್ಕಾರ, ಕೇಂದ್ರದಿಂದ ಅಗತ್ಯ ನೆರವು ತರುವಲ್ಲಿ ವಿಫ‌ಲವಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರನ್ನು ರಾಜ್ಯ ಕಾಂಗ್ರೆಸ್‌ ಉತ್ತರಕುಮಾರನಿಗೆ ಹೋಲಿಸಿದೆ.

Advertisement

ಈ ಸಂಬಂಧ ಇಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ನೆರೆ ಪರಿಹಾರ ವಿಷಯದಲ್ಲಿ ಇಂತಹ ಯೋಗ್ಯತೆ, ಸಮರ್ಥತೆ, ಸಂವೇದನೆ ತೋರಿರುವ ಇವರು ಕರ್ನಾಟಕದ ಉತ್ತರಕುಮಾರರೇ ಸರಿ’ ಎಂದು ಹೇಳಿದೆ. ಈ ಮೂಲಕ ಪ್ರವಾಹಕ್ಕೆ ಪರಿಹಾರ ದೊರಕಿಸಿಕೊಡುವಲ್ಲಿ ವಿಫ‌ಲರಾಗಿರುವ ರಾಜ್ಯ ಬಿಜೆಪಿ ನಾಯಕರ ಕಾಲೆಳೆಯುವ ಕಾರ್ಯ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next