Advertisement

ಸುದ್ದಿಗೋಷ್ಠಿಯಲ್ಲಿ ವರದಿಗಾರನ ಮೇಲೆ ಬಿಜೆಪಿ ನಾಯಕರ ಗೂಂಡಾಗಿರಿ 

04:19 PM Dec 02, 2017 | Team Udayavani |

 ತುಮಕೂರು: ಇಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನೊಬ್ಬನ ಮೇಲೆ ಬಿಜೆಪಿ ಮುಖಂಡರಿಬ್ಬರು ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿ ಗೂಂಡಾಗಿರಿ ಮೆರೆದ ಘಟನೆ ಶನಿವಾರ ನಡೆದಿದೆ.

Advertisement

ಅಕ್ರಮ ಕಲ್ಲು ಗಣಿಗಾರಿಗೆಯ ಬಗ್ಗೆ ವರದಿ ಮಾಡಿದ ಖಾಸಗಿ ವಾಹಿನಿಯ ವರದಿಗಾರ ವಾಗೀಶ್‌ ಎನ್ನುವವರ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ  ಮತ್ತು ಪಾಲಿಕೆ ಸದಸ್ಯ ಬಾವಿಕಟ್ಟೆ ನಾಗಣ್ಣ ಎನ್ನುವವರು ಏಕಾಏಕಿ  ಎರಗಿ  ಹಲ್ಲೆ ನಡೆಸಿ ಬಟ್ಟೆಹರಿದು ಹಾಕಿದ್ದಾರೆ. 

ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಪ್ರಕರಣದ ತನಿಖೆ ನಡೆಸುವುದಾಗಿ  ತುಮಕೂರು ಎಸ್‌ಪಿ ದಿವ್ಯಾ ಗೋಪಿನಾಥ್‌ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. 

ಹಲ್ಲೆ ನಡೆದ ವೇಳೆ ವಾಗೀಶ್‌ ಒಬ್ಬರೆ ಇದ್ದು ಅಸಹಾಯಕರಾಗಿದ್ದರು, ಬೇರೆ ಯಾವ ಚಾನಲ್‌ನ ಪತ್ರಕರ್ತರು ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ನಿರಂತರವಾಗಿ ವಾಗೀಶ್‌ಗೆ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next