Advertisement

ಕಾರವಾರದಲ್ಲಿ BJP ಬಂಡಾಯ: ಮಾಜಿ ಶಾಸಕ ಗಂಗಾಧರ ಭಟ್ ನಾಮಪತ್ರ ಸಲ್ಲಿಕೆ

04:22 PM Apr 17, 2023 | Team Udayavani |

ಕಾರವಾರ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಗಂಗಾಧರ ಭಟ್ ನಾಮಪತ್ರ ಸಲ್ಲಿಸಿದರು‌. ಅವರ ಬೆಂಬಲಿಗರ ಜೊತೆ ಆಗಮಿಸಿದ ಅವರು ಹಾಲಿ ಶಾಸಕಿ, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು.‌

Advertisement

ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾನು 2004 ರಲ್ಲಿ ಕಾರವಾರ ಜೊಯಿಡಾ ಕ್ಷೇತ್ರ ಇದ್ದಾಗ ಮೊದಲ ಬಾರಿಗೆ ಬಿಜೆಪಿಗೆ ಜಯ ತಂದುಕೊಟ್ಟಿದ್ದೆ .ಅಲ್ಲಿಂದ ನನಗೆ ಮೂರು ಸಲ ಟಿಕೆಟ್ ವಂಚಿಸಲಾಗುತ್ತಿದೆ. ಈಗ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಾಗುತ್ತಿಲ್ಲ. ಮೂರು ತಿಂಗಳ ಹಿಂದೆ ಪಕ್ಷದ ಹಿರಿಯರು ನನ್ನ ಕರೆಯಿಸಿಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಿ, ಟಿಕೆಟ್ ಕೊಡ್ತೇವೆ ಅಂದಿದ್ದರು. ನಾನು ಸಹ ಲಕ್ಷಾಂತರ ರೂ.‌ಪಾರ್ಟಿ ಫಂಡ್ ಕೊಟ್ಟು ಬಂದಿದ್ದೆ. ಈಗ ನೋಡಿದರೆ ನನಗೆ ಟಿಕೆಟ್ ಕೊಟ್ಟಿಲ್ಲ. ಪಕ್ಷದಲ್ಲಿ ಏನಾಗುತ್ತಿದೆ‌ ಎಂಬುದೇ ನನಗೆ ತಿಳಿಯುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಕಾಲದ ಬಿಜೆಪಿ ಈಗ ಇಲ್ಲ ಎಂದರು. ನನ್ನ ನಂಬಿಸಿ, ಹಣ ಪಡೆದು ಟಿಕೆಟ್ ತಪ್ಪಿಸಲಾಗಿದೆ.

ಇದು ನನ್ನ ಕೊನೆಯ‌ ಚುನಾವಣೆ. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಆದರೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಇರುವೆ ಎಂದರು.‌ 2004ರಲ್ಲಿ ನಾನು ಬಿಜೆಪಿ ಶಾಸಕನಾಗಿದ್ದಾಗ ನಮಗೆ ೪೦ ತಿಂಗಳು ಮಾತ್ರ ಅಧಿಕಾರ ಇತ್ತು‌ . ನಂತರ ನಡೆದ ಚುನಾವಣೆಯಲ್ಲಿ ಟಕೆಟ್ ತಪ್ಪಿಸಲಾಯಿತು‌ . ನಂತರ ಮತ್ತೆ ಟಿಕೆಟ್ ಗೆ ಕಾದೆ. ಮೂರು ಚುನಾವಣೆ ಅಂದರೆ 15 ವರ್ಷಗಳಿಂದ ಟಿಕೆಟ್ ಗಾಗಿ ಕಾದೆ. ಆದರೆ ಪಕ್ಷದಲ್ಲಿ ನನ್ನ ಕೆಲಸ ಪಡೆದು ,‌ಹಣ ಪಡೆದು ಮೂಲೆ ಗುಂಪು ಮಾಡಿದರು ಎಂದು ಮಾಜಿ ಶಾಸಕ ಗಂಗಾಧರ ಭಟ್ ನೋವು ಹೊರ ಹಾಕಿದರು.
ಅವರ ಬೆಂಬಲಿಗರು ಈ ವೇಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next