Advertisement

ಪಠ್ಯ ಪರಿಷ್ಕರಣೆ: ಕಾಂಗ್ರೆಸ್ ಪ್ರೇರಿತ ಈ ಟೂಲ್ ಕಿಟ್ ಗೆ ಬಗ್ಗಬೇಕಿಲ್ಲ: ಬಿಜೆಪಿ ಹೈಕಮಾಂಡ್

01:01 PM Jun 01, 2022 | Team Udayavani |

ಬೆಂಗಳೂರು: ಪಠ್ಯ ಪರಿಷ್ಕರಣೆ ವಿಷಯದಲ್ಲಿ ಸರಕಾರದ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಬಗ್ಗಬೇಕಿಲ್ಲ. ಕಾಂಗ್ರೆಸ್ ಪ್ರೇರಿತ ಈ ಟೂಲ್ ಕಿಟ್ ಗೆ ದಿಟ್ಟವಾಗಿ ಉತ್ತರಿಸಿ ಎಂದು ಬಿಜೆಪಿ ಹೈಕಮಾಂಡ್ ನಿಂದ ಸ್ಪಷ್ಟ ಸೂಚನೆ ನೀಡಿದ್ದು ಹೆಜ್ಜೆ ಹಿಂದೆ ಇಡದಂತೆ ನಿರ್ದೇಶನ ನೀಡಲಾಗಿದೆ.

Advertisement

ವರಿಷ್ಠರಿಂದ ಸೂಚನೆ ಹೊರ ಬರುತ್ತಲೇ ಸಂಪುಟದ ಎಲ್ಲ ಸಚಿವರು ಈಗ ಪಠ್ಯ ಪರಿಷ್ಕರಣೆ ವಿರುದ್ಧ ಧ್ವನಿಯ ವಿರುದ್ಧವೇ ಮಾತನಾಡಲಾರಂಭಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ಡಾ.ಸುಧಾಕರ, ನಿರಾಣಿ, ನಾರಾಯಣಗೌಡ, ನಾಗೇಶ್ ಸೇರಿದಂತೆ ಅನೇಕ ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪಠ್ಯ ಪರಿಷ್ಕರಣೆಯ ವಾಸ್ತವಾಂಶದ ಆಧಾರದಲ್ಲಿ ನಾಳೆಯೇ ಸೂಕ್ತ ನಿರ್ಧಾರ: ಸಿಎಂ ಬೊಮ್ಮಾಯಿ

ತಮ್ಮ ಲೇಖನ, ಕವನಗಳನ್ನು ಪಠ್ಯದಿಂದ ಕೈ ಬಿಡಿ ಎಂದು ಸಾಹಿತಿಗಳು ಸರಕಾರಕ್ಕೆ ಪತ್ರ ಬರೆಯುತ್ತಿರುವುದನ್ನು ಖಂಡಿಸಿ ಅಭಿಪ್ರಾಯ ರೂಪಿಸುವಂತೆಯೂ ಸೂಚನೆ ನೀಡಲಾಗಿದೆ. ಅವಾರ್ಡ್ ವಾಪ್ಸಿ ರೀತಿ ಸಾಹಿತಿಗಳು ಈ ಪತ್ರ ಬರೆದಿದ್ದಾರೆ. ಈ ಟೂಲ್ ಕಿಟ್ ಹೋರಾಟಕ್ಕೆ ಸೊಪ್ಪು ಹಾಕದಂತೆ ಸರಕಾರಕ್ಕೆ ಒತ್ತಾಯಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next