Advertisement

ಬಿಜೆಪಿ ಸರ್ಕಾರ ಗೋಮಂತಕೀಯ ಕಲಾವಿದರ ಗೌರವ ಉಳಿಸಿಕೊಳ್ಳುವಲ್ಲಿ ವಿಫಲ: ಕಾಮತ್

02:44 PM Nov 15, 2021 | Team Udayavani |

ಪಣಜಿ: ಗೋವಾದಲ್ಲಿ ನೊವೆಂಬರ್ 20 ರಿಂದ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೊಂಕಣಿ ಹಾಗೂ ಮರಾಠಿ ಚಲನಚಿತ್ರಗಳಿಗಾಗಿ ಗೋವಾ ಪ್ರೀಮಿಯರ್ ಅಧೀಕೃತ ವಿಭಾಗ ಮಾಡುವ ಅಗತ್ಯವಿದ್ದು, ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ತ್ವರಿತವಾಗಿ ಹಸ್ತಕ್ಷೇಪ ಮಾಡಿ ಗೋವಾದ ಚಲನಚಿತ್ರ ಕ್ಷೇತ್ರಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಆಗ್ರಹಿಸಿದ್ದಾರೆ.

Advertisement

ಮಡಗಾಂವ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರವು ಗೋಮಂತಕೀಯ ಕಲಾವಿದರು ಮತ್ತು ಚಲನಚಿತ್ರ ಕಲಾಕಾರರ ಗೌರವವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಕೋವಿಡ್ ಮಹಾಮಾರಿಯ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಕೂಡ ಗೋವಾದ ಚಲನಚಿತ್ರ ನಿರ್ಮಾಪಕರು ಚಲನಚಿತ್ರ ನಿರ್ಮಾಣ ಮಾಡಿದ್ದಾರೆ. ಇದು ಅಭಿಮಾನ ಪಡುವ ವಿಷಯವಾಗಿದೆ. ಸರ್ಕಾರವು ಇವರ ಚಲನಚಿತ್ರಗಳನ್ನು ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ಅಧೀಕೃತ ವಿಭಾಗದಲ್ಲಿ ಪ್ರದರ್ಶಿಸುವುದು ಈ ಚಲನಚಿತ್ರ ನಿರ್ಮಾಪಕರಿಗೆ ಮತ್ತು ಕಲಾವಿದರಿಗೆ ಗೌರವ ನೀಡಿದಂತೆ’ ಎಂದು ದಿಗಂಬರ್ ಕಾಮತ್ ಅಭಿಪ್ರಾಯಪಟ್ಟರು.

‘ಗೋವಾ ಫಿಲ್ಮ್ ಫೈನಾನ್ಸ್ ಯೋಜನೆಯ ಅಡಿಯಲ್ಲಿ ಕಲಂ 8 ರ ನಿಯಮ ಕ ಪ್ರಕಾರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಫಿಚ್ಚರ್ ಫಿಲ್ಮ್ ಗೆ 5 ಲಕ್ಷ ರೂ. ಹಾಗೂ ನಾನ್ ಫಿಚ್ಚರ್ ಫಿಲ್ಮ್ ಗೆ 2.50 ಲಕ್ಷ ರೂ ಆರ್ಥಿಕ ಸಹಾಯ ನೀಡಲಾಗುತ್ತಿತ್ತು. ಆದರೆ ಕಳೆದ 5 ವರ್ಷಗಳಿಂದ ಈ ಯೋಜನೆಯ ಅಡಿಯಲ್ಲಿ ಯಾವುದೇ ಅನುದಾನ ನೀಡಲಾಗಿಲ್ಲ’ ಎಂದು ದಿಗಂಬರ್ ಕಾಮತ್ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next