Advertisement

ಬಿಜೆಪಿಗೆ ಮತ ಬಾರದಿದ್ರೆ ಹಿಂಸಾಚಾರ!

12:47 AM Apr 08, 2019 | Team Udayavani |

“ಈ ಚುನಾವಣೆಯಲ್ಲಿ ಬಿಜೆಪಿ ಪರ ಶೇ. 90ರಷ್ಟು ಮತಗಳು ಹರಿದುಬರುವಂತೆ ಮಾಡಿ. ಇಲ್ಲವಾದರೆ ಹಿಂಸಾಚಾರ ಎದುರಿಸಲು ಸಿದ್ಧವಾಗಿ’. ಇದು, ಮಣಿಪುರದ ಬಂಡುಕೋರರ ಗುಂಪಾದ “ಕುಕಿ ನ್ಯಾಷನಲ್‌ ಆರ್ಮಿ’ (ಕೆಎನ್‌ಎ) ಕಮಾಂಡರ್‌ ಥಾಂಗ್‌ಬೊಯ್‌ ಹಾವೊಕಿಪ್‌, ಮಣಿಪುರ ಹೊರವಲಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಮುಖಂಡರಿಗೆ ನೀಡಿರುವ ಎಚ್ಚರಿಕೆ! ಮೊರೇಹ್‌ ಪಟ್ಟಣದ ಡಿ.ಮೌನಪ್ಪಾಯ್‌ ಎಂಬ ಹಳ್ಳಿಯಲ್ಲಿ ರವಿವಾರ ನಡೆದ ಸುತ್ತಮುತ್ತಲಿನ ಹಳ್ಳಿಗಳ ಮುಖಂಡರ ಸಭೆಯಲ್ಲಿ ಮಣಿಪುರ ಹೊರವಲಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಂಜಮಿನ್‌ ಮಾಟೆ ಪರ ಮಾತನಾಡುವ ವೇಳೆ ಈ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next