Advertisement

ಬಿಜೆಪಿ ಬಿಡಲಾರೆ: ವಿಜಯಶಂಕರ್‌

10:02 AM Oct 09, 2017 | Team Udayavani |

ಮೈಸೂರು: “ಬಿಜೆಪಿ ನನ್ನ ತಾಯಿಗೆ ಸಮಾನ. ನಾನೆಂದೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ. ಈಗಲೂ ಬಿಜೆಪಿಯಲ್ಲಿ ದ್ದೇನೆ. ಇಲ್ಲಿಯೇ ಇರುತ್ತೇನೆ’ ಎಂದು ಮಾಜಿ ಎಂಎಲ್ಸಿ ಸಿ.ಎಚ್‌. ವಿಜಯಶಂಕರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಜಿಲ್ಲಾ ರೈತ ಮೋರ್ಚಾದಿಂದ ರವಿವಾರ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಬಿಜೆಪಿಗೆ ನಾನೆಂದೂ ದ್ರೋಹ ಮಾಡುವುದಿಲ್ಲ. ಆದರೆ ಪಕ್ಷದ ಕೆಲವು ಮುಖಂಡರ ನಡವಳಿಕೆ ಯಿಂದ ನೋವಾಗಿದ್ದು, ಈ ಬಗ್ಗೆ ರಾಜ್ಯ ನಾಯಕರಿಗೆ ತಿಳಿಸಿದ್ದೇನೆ. ಯಡಿಯೂರಪ್ಪ ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು. 

ಸಿಎಂ ಜತೆಗಿನ ಫೋಟೊ ಕುರಿತು ಪ್ರತಿಕ್ರಿಯಿಸಿ, “ಅದು ಹಳೆಯದು. ಅವರ ಪುತ್ರ ರಾಕೇಶ್‌ ಪುಣ್ಯತಿಥಿ ಕಾರ್ಯಕ್ಕೆ ಹೋಗಿದ್ದ ಸಂದರ್ಭದ ಫೋಟೊ ಅದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next