Advertisement

ಸೋದರ ಸಂಬಂಧಿ ಭ್ರಷ್ಟಾಚಾರ: ಮಮತಾ ರಾಜೀನಾಮೆಗೆ ಬಿಜೆಪಿ ಆಗ್ರಹ

04:22 PM Aug 02, 2017 | Team Udayavani |

ಹೊಸದಿಲ್ಲಿ : ಸೋದರ ಸಂಬಂಧಿಯಾಗಿರುವ ತೃಣಮೂಲ ಸಂಸದ ಅಭಿಷೇಕ್‌ ಬ್ಯಾನರ್ಜಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಷಯದಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುದ್ಧಹಸ್ತರಾಗಿ ಮೂಡಿ ಬರಬೇಕು ಇಲ್ಲವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. 

Advertisement

ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು, “ಅಭಿಷೇಕ್‌ ಬ್ಯಾನರ್ಜಿ ತಾನು ಲೀಪ್ಸ್‌ ಆ್ಯಂಡ್‌ ಬೌಂಡ್ಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ನಿರ್ದೇಶಕರಾಗಿದ್ದಾಗ ರಾಜ್‌ ಕಿಶೋರ್‌ ಮೋದಿ ಎಂಬ ರಿಯಲ್‌ ಎಸ್ಟೇಟ್‌ ಉದ್ಯಮಿಯಿಂದ 1.15 ಕೋಟಿ ರೂ. ಲಂಚ ಪಡೆದಿದ್ದಾರೆ; ರಾಜ್‌ ಕಿಶೋರ್‌ ಮೋದಿ ಭೂಕಬಳಿಕೆ ಸಹಿತ ಕ್ರಿಮಿನಲ್‌ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ’ ಎಂದು ಆರೋಪಿಸಿದರು. 

“ಆಶ್ಚರ್ಯಕರವೆಂಬಂತೆ ಮಮತಾ ಬ್ಯಾನರ್ಜಿ ಅವರು 2009ರಲ್ಲಿ ಅದೇ ರಾಜ್‌ ಕಿಶೋರ್‌ ವಿರುದ್ಧ ರೈತರ ಭೂಕಬಳಿಕೆಯ ಆರೋಪ ಮಾಡಿ ಆತನ ಬಂಧನಕ್ಕೆ ಒತ್ತಾಯಿಸಿದ್ದರು’ ಎಂದು ಜಾವಡೇಕರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next