Advertisement

BJP ಚನ್ನಪಟ್ಟಣ ಟಿಕೆಟ್‌ ಯೋಗೇಶ್ವರ್‌ಗೆ ಖಚಿತ?

12:04 AM Aug 16, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಎನ್‌ಡಿಎ ಮಿತ್ರಕೂಟದಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟಿಗೆ ಕುತೂಹಲಕಾರಿ ತಿರುವು ಲಭಿಸಿದ್ದು, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಬಿಜೆಪಿ ವರಿಷ್ಠರಿಂದ ಟಿಕೆಟ್‌ ಅಭಯ ದೊರೆತಿದೆ ಎನ್ನಲಾಗಿದೆ.

Advertisement

2 ದಿನಗಳ ಹಿಂದಷ್ಟೇ ದಿಲ್ಲಿಗೆ ಪ್ರಯಾಣ ಬೆಳೆಸಿದ್ದ ಯೋಗೇಶ್ವರ್‌ ಪಕ್ಷದ ಪ್ರಮುಖರೊಬ್ಬರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, “ಗೋ ಅಹೆಡ್‌’ ಎಂಬ ಸಂದೇಶ ಲಭಿಸಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಯೋಗೇಶ್ವರ್‌ ಸ್ಪರ್ಧಿಸಿದರೆ ಮಾತ್ರ ಚನ್ನಪಟ್ಟಣದಲ್ಲಿ ಗೆಲ್ಲಲಿದೆ ಎಂದು ಹೈಕಮಾಂಡ್‌ ತಿಳಿದುಕೊಂಡಿದೆ. ಹೀಗಾಗಿ ಹೆಚ್ಚಿನ ಪ್ರಯೋಗಕ್ಕೆ ಕೈ ಹಾಕದೇ ಇರಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next