Advertisement

BJP; ಮತ್ತೆ ವರಿಷ್ಠರ ಮನವೊಲಿಸಲು ಯೋಗೇಶ್ವರ್‌ ನಾಳೆ ದಿಲ್ಲಿಗೆ

01:21 AM Aug 25, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್‌ ಮತ್ತು ಎನ್‌ಡಿಎ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದರೂ ಅಭ್ಯರ್ಥಿ ಅಖೈರು ಗೊಳಿಸುವುದಕ್ಕೆ ಸಿ.ಪಿ. ಯೋಗೇಶ್ವರ್‌ ನಡೆಯೇ ಅಡ್ಡಿಯಾಗಿದೆ. ಈ ನಡುವೆಯೇ ಸೋಮವಾರ ಬಿಜೆಪಿ ವರಿಷ್ಠರ ಮನವೊಲಿಸಲು ಯೋಗೇಶ್ವರ್‌ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.

Advertisement

ಒಂದು ವೇಳೆ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ತಾವಾಗೇ ಚನ್ನಪಟ್ಟಣವನ್ನು ಜೆಡಿಎಸ್‌ಗೆ ಧಾರೆ ಎರೆದಂತಾಗುತ್ತದೆ. ಮತ್ತೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದು ಯೋಗೇಶ್ವರ್‌ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂದು ತೀರ್ಮಾನಿಸಿರುವ ಅವರು, ರಾಜ್ಯ ಬಿಜೆಪಿ ನಾಯಕರ ಬೆಂಬಲದೊಂದಿಗೆ ದಿಲ್ಲಿಯಲ್ಲಿ ಲಾಬಿ ನಡೆಸಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next