Advertisement

Chennapattana: ಜೆಡಿಎಸ್‌, ಕಾಂಗ್ರೆಸ್‌ ಪಾಳಯದಲ್ಲಿ ಗೊಂದಲ ಮೂಡಿಸಿದ ಸಿಪಿವೈ ನಡೆ

03:27 AM Aug 25, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ ಮತ್ತು ಎನ್‌ಡಿಎ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದರೂ ಅಭ್ಯರ್ಥಿ ಅಖೈರು ಗೊಳಿಸುವುದಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನಡೆಯೇ ಅಡ್ಡಿಯಾಗಿದೆ.

Advertisement

ಈಗಾಗಲೇ ಯೋಗೇಶ್ವರ್‌, ಎನ್‌ಡಿಎ ಟಿಕೆಟ್‌ ಸಿಗಲಿ, ಸಿಗದೇ ಇರಲಿ ಸ್ಪರ್ಧೆ ಮಾಡುವುದು ಖಚಿತ ಎಂದು ಘೋಷಿಸಿದ್ದಾರೆ. ಸೈನಿಕನ ಈ ನಡೆ ಒಂದೆಡೆ ದಳಪತಿಗಳಿಗೆ, ಮತ್ತೂಂದೆಡೆ ಕೈ ಪಾಳಯಕ್ಕೆ ಗೊಂದಲ ತಂದಿಟ್ಟಿದ್ದು, ಯೋಗೇಶ್ವರ್‌ ನಡೆ ಆಧರಿಸಿ ಅಭ್ಯರ್ಥಿ ಆಯ್ಕೆ ಬಗ್ಗೆ ಎರಡೂ ಪಕ್ಷಗಳು ಕಾದು ನೋಡುತ್ತಿವೆ.

ಈ ಚುನಾವಣೆ ಯೋಗೇಶ್ವರ್‌ ರಾಜಕೀಯ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಕಣವಾಗಿ ಪರಿಣಮಿಸಿದೆ. ಒಂದು ವೇಳೆ ಕ್ಷೇತ್ರ ಬಿಟ್ಟುಕೊಟ್ಟರೆ ಮತ್ತೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಕಷ್ಟ ಎಂಬುದು ಅರಿತಿದ್ದು, ಕ್ಷೇತ್ರ ಬಿಟ್ಟುಕೊಡಲು ಒಪ್ಪುತ್ತಿಲ್ಲ.

ಟಿಕೆಟ್‌ಗಾಗಿ ದೆಹಲಿ ಯಾತ್ರೆ:
ತಮಗೆ ಆಪ್ತರಾಗಿರುವ ರಾಜ್ಯ ಬಿಜೆಪಿ ನಾಯಕರ ಬೆಂಬಲ ಪಡೆದು ದೆಹಲಿಯಲ್ಲಿ ಲಾಬಿ ನಡೆಸಲು ಯೋಗೇಶ್ವರ್‌ ಮುಂದಾಗಿದ್ದಾರೆ. ಸೋಮವಾರ ದೆಹಲಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದು, ಕುತೂಹಲ ಕೆರಳಿಸಿದೆ. ಇನ್ನೊಂದೆಡೆ, ಯೋಗೇಶ್ವರ್‌ಗೆ ಟಿಕೆಟ್‌ ಕೊಡಲು ಚನ್ನಪಟ್ಟಣದ ಕೆಲ ಜೆಡಿಎಸ್‌ ಮುಖಂಡರು ಸುತಾರಾಂ ಒಪ್ಪುತ್ತಿಲ್ಲ. ನಿಖೀಲ್‌ ಕುಮಾರಸ್ವಾಮಿ ಹೆಸರು ಮುಂಚೂಣಿಗೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next