Advertisement

A.P: ಆಂಧ್ರದಲ್ಲಿ ಬಿಜೆಪಿ ಜೊತೆ ಚಂದ್ರಬಾಬು, ಪವನ್‌ ಕಲ್ಯಾಣ್‌ ಮೈತ್ರಿ?

09:47 PM Feb 08, 2024 | Team Udayavani |

ನವದೆಹಲಿ: ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬುಧವಾರ ರಾತ್ರಿ ಬಿಜೆಪಿ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಆಂಧ್ರದಲ್ಲಿ ಟಿಡಿಪಿ, ಬಿಜೆಪಿ, ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನೆ ಪಕ್ಷಗಳು ಒಗ್ಗೂಡಿ ಲೋಕಸಭಾ ಚುನಾವಣೆ ಎದುರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Advertisement

ಮೂಲಗಳ ಪ್ರಕಾರ, ಮುಂದಿನ ಗುರುವಾರ ಪವನ್‌ ಕಲ್ಯಾಣ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಬಿಜೆಪಿ ವರಿಷ್ಠರ ಜತೆಗೂ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ಟಿಡಿಪಿ ಜತೆಗಿನ ಜನಸೇನೆ ಮೈತ್ರಿ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎನ್ನಲಾಗಿದೆ. ಸಿಎಂ ಜಗನ್‌ ಮೋಹನ್‌ ರೆಡ್ಡಿ ಸರ್ಕಾರದ ಕಟು ಟೀಕಾಕಾರರಾಗಿರುವ ಪವನ್‌, ಜಗನ್‌ ಸರ್ಕಾರವನ್ನು ಕೆಳಗಿಳಿಸುವ ಯಾವ ಪಕ್ಷದೊಂದಿಗಾದರೂ ಮೈತ್ರಿ ಮಾಡಿಕೊಳ್ಳಬಲ್ಲೆ ಎಂದು ಘೋಷಿಸಿದ್ದರು .

ಅಸ್ಸಾಂನಲ್ಲಿ “ಕೈ’ ಬಿಟ್ಟ ಆಪ್‌: ಇಂಡಿಯಾ ಒಕ್ಕೂಟದಿಂದೇ ಒಂದೊಂದೇ ಪಕ್ಷಗಳು ಕಳಚಿಕೊಳ್ಳುತ್ತಿವೆ. ಇದೀಗ ಅಸ್ಸಾಂನಲ್ಲಿ 3 ಲೋಕಸಭೆ ಸ್ಥಾನಗಳಿಗೆ ಆಪ್‌ ಏಕಪಕ್ಷೀಯವಾಗಿ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸಿ ಸುಸ್ತಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ಆಪ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next