Advertisement

ಫಲಿತಾಂಶಕ್ಕೂ ಮುನ್ನವೇಬಿಜೆಪಿ ವಿಜಯೋತ್ಸವ!

11:51 AM May 14, 2018 | Team Udayavani |

ಆಳಂದ: ಮತ ಎಣಿಕೆಗೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಬಿಜೆಲಿ ಕಾರ್ಯಕರ್ತರು ವಿಜಯೋತ್ಸವ
ಆಚರಿಸಿದ್ದಾರೆ! ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರ ಗೆಲುವಾಗಿದೆ ಎಂದು ಕಾರ್ಯಕರ್ತತು ಶವಿನಾವರವೇ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಪಟ್ಟಣದ ಹೊರವಲಯದ ಸಂಗೋಳಗಿ (ಜಿ), ಪುನರ್‌ವಸತಿ ಕೇಂದ್ರದ
ಬಿಜೆಪಿ ಕಾರ್ಯಕರ್ತರು ಮತದಾನ ಮುಗಿಯುತ್ತಿದ್ದಂತೆ ಶನಿವಾರ ಸಂಜೆ 6:30ರ ಸುಮಾರಿಗೆ ಹಳೆ ಚೆಕ್‌ಪೋಸ್ಟ್‌
ಹತ್ತಿರದ ರಾಜ್ಯ ಹೆದ್ದಾರಿ ವೃತ್ತದಲ್ಲಿ ಬಿಜೆಪಿ ರಾಜ್ಯ ಘಟಕದ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ
ಪಾಟೀಲ ನೇತೃತ್ವದಲ್ಲಿ ಜಮಾಯಿಸಿದ ಪಟಾಕಿ ಸಿಡಿಸಿ, ಪರಸ್ಪರ ಸಹಿ ಹಂಚಿ ಸಂಭ್ರಮಿಸಿದರು. ಮುಖಂಡ
ವಿಜಕುಮಾರ ಮುನ್ನೋಳಿ, ವಿಜಯ ಜಾಧವ, ಸಿದ್ರಾಮಯ್ಯ ಮಠಪತಿ, ಶರಣಬಸು ಮುನ್ನೋಳ್ಳಿ, ನಿಜಲಿಂಗಪ್ಪ
ಜಾಧವ, ಶ್ರೀಕಾಂತ ಭರಮಾಣೆ, ಸತೀಶ ಪಾಟೀಲ, ಕೋಟೇಶ ರಾಠೊಡ ಸೇರಿ ಅನೇಕ ಕಾರ್ಯಕರ್ತರು
ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next