Advertisement

ಓದಲಿಲ್ಲವೆಂದು ಮಗುವಿನ ಕೆನ್ನೆಯನ್ನೇ ಕಚ್ಚಿದ ಭೂಪ

10:29 PM Jan 12, 2020 | Lakshmi GovindaRaj |

ದೊಡ್ಡಬಳ್ಳಾಪುರ: ತಾಲೂಕಿನ ಎಳ್ಳುಪುರ ಗ್ರಾಮದಲ್ಲಿ ನಾಗರಾಜ್‌ (30) ಎಂಬಾತ ಓದಲಿಲ್ಲ ಎನ್ನುವ ಕಾರಣಕ್ಕೆ 4 ವರ್ಷದ ಹೆಣ್ಣು ಮಗುವಿನ ಕೆನ್ನೆ ಕಚ್ಚಿ, ಮಗುವಿನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಮಗುವಿನ ತಂದೆ ತೀರಿಕೊಂ ಡಿದ್ದು, ಹೊಸಪೇಟೆ ಮೂಲದ ಈಕೆಯ ತಾಯಿ, ಕೋಳೂರು ನಿವಾಸಿ ನಾಗರಾಜ್‌ನ ಜೊತೆ 20 ದಿನಗಳಿಂದ ಎಳ್ಳುಪುರದಲ್ಲಿ ಲಿವಿಂಗ್‌ ಟುಗೆದರ್‌ನಲ್ಲಿದ್ದಾಳೆ.

Advertisement

ನಾಗರಾಜ್‌ ಈಕೆಗೆ ಫೇಸ್‌ಬುಕ್‌ ಮೂಲಕ ಪರಿಚಿತನಾಗಿದ್ದ. ಹೆಣ್ಣು ಮಗುವಿಗೆ 9 ವರ್ಷದ ಅಣ್ಣನಿದ್ದಾನೆ. ಶನಿವಾರ ಸಂಜೆ ಮಗುವಿಗೆ ಓದು ಎಂದು ನಾಗರಾಜ್‌ ಬಲವಂತ ಮಾಡಿದ. ಮಗು ಸರಿಯಾಗಿ ಓದಲಿಲ್ಲ. ಇದರಿಂದ ಕೋಪಗೊಂಡ ನಾಗರಾಜ್‌, ಮಗುವಿನ ಕೆನ್ನೆ ಕಚ್ಚಿ, ದೈಹಿಕ ಕಿರುಕುಳ ನೀಡಿದ. ಇದರಿಂದ ಮಗುವಿನ ಕಾಲುಗಳು ಊದಿಕೊಂಡಿವೆ. ವಿಷಯ ತಿಳಿದ ಸ್ಥಳೀಯರು ನಾಗರಾಜ್‌ಗೆ ಗೂಸಾ ಕೊಟ್ಟು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next