Advertisement

ರಂಗದ ಮೇಲೆ ಹಾಸ್ಯಚಕ್ರವರ್ತಿ ಜೀವನ ಚರಿತ್ರೆ

08:34 AM Jul 26, 2019 | Lakshmi GovindaRaj |

ಇದೇ ಮೊದಲ ಸಲ ಕನ್ನಡದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಜೀವನ ಚರಿತ್ರೆ ಕುರಿತು ರಂಗಪ್ರಯೋಗ ಮಾಡಲು ಹಿರಿಯ ರಂಗಕರ್ಮಿ, ನಟ, ನಿರ್ದೇಶಕ ರಾಘವೇಂದ್ರ ಅವರು ಮುಂದಾಗಿದ್ದಾರೆ.

Advertisement

ಬುಧವಾರ ನರಸಿಂಹರಾಜು ಅವರ ಜನ್ಮದಿನದಂದು ಅವರು ಘೋಷಣೆ ಮಾಡಿದ್ದಾರೆ. ನರಸಿಂಹರಾಜು ಅವರ ಜೀವನ ಚರಿತ್ರೆ, ಸಿನಿಮಾ ಬದುಕು ಹಾಗು ವೈಯಕ್ತಿಕ ಬದುಕಿನ ಕೆಲ ದುರಂತಗಳ ಕುರಿತಂತೆ ರಂಗಪ್ರಯೋಗ ಮಾಡುವ ಚಿಂತನೆ ನಡೆಸಿದ್ದಾರೆ. ಕನ್ನಡದಲ್ಲಿ ಇದು ಮೊದಲ ಪ್ರಯೋಗ ಎನ್ನಲಾಗಿದೆ.

ಈ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಜೀವನ ಚರಿತ್ರೆ ಕುರಿತ ರಂಗಪ್ರಯೋಗದಲ್ಲಿ ಡಾ.ರಾಜಕುಮಾರ್‌, ಬಾಲಕೃಷ್ಣ, ಲಕ್ಷ್ಮೀದೇವಿ ಹೀಗೆ ಇತರೆ ಪಾತ್ರಗಳು ಕೂಡ ಕಾಣಿಸಿಕೊಳ್ಳಲಿವೆ. ಈ ಕುರಿತಂತೆ ಇಷ್ಟರಲ್ಲೇ ಅದರ ಪೂರ್ಣ ಮಾಹಿತಿ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next