Advertisement

ಬಿಂದು, ಕನಕದುರ್ಗಾಗೆ ಬೆದರಿಕೆ ಪತ್ರ

12:30 AM Feb 04, 2019 | Team Udayavani |

ಮಲಪ್ಪುರಂ: ಇತ್ತೀಚೆಗೆ ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸಿ ಸುದ್ದಿಯಾದ ಬಿಂದು ಹಾಗೂ ಕನಕದುರ್ಗಾ ಅವರಿಗೆ ಜೀವ ಬೆದರಿಕೆ ಪತ್ರಗಳು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 

Advertisement

ಇವರಿಬ್ಬರಿಗೂ ಪತ್ರ ಬಂದಿದ್ದು, ದೇಗುಲವನ್ನು ಪ್ರವೇಶಿಸಿದ್ದಕ್ಕೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಸದ್ಯ ಇಬ್ಬರು ಮಹಿಳೆಯರಿಗೂ ಭದ್ರತೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಈ ನಡುವೆ, ಜ.3ರಂದು ನಡೆದ ಹರತಾಳದ ವೇಳೆ ನೆಡುಮಂಗಾಡ್‌ ಪೊಲೀಸ್‌ ಠಾಣೆ ಮೇಲೆ ಬಾಂಬ್‌ ಎಸೆದ ಪ್ರಕರಣ ಸಂಬಂಧ ಆರೆಸ್ಸೆಸ್‌ ಕಾರ್ಯಕರ್ತ ಪ್ರವೀಣ್‌ ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಪ್ರವೀಣ್‌ ಬಾಂಬ್‌ ಎಸೆಯು ತ್ತಿರುವುದು ದಾಖಲಾದ ಹಿನ್ನೆಲೆಯಲ್ಲಿ, ಆತನ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next