Advertisement

ಬಿಲ್ಲವ ಭವನದಲ್ಲಿ ಗುರು ಜಯಂತಿ, ಸಾಮೂಹಿಕ ಜಪಯಜ್ಞ 

03:44 PM Sep 08, 2017 | Team Udayavani |

ಮುಂಬಯಿ: ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ವತಿಯಿಂದ  ಬ್ರಹ್ಮಶ್ರೀನಾರಾಯಣ ಗುರುಗಳ‌ 163ನೇ ಜಯಂತ್ಯುತ್ಸವವು  ಸೆ. 6ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೋಟಿ ಸರ್ಪ ಮಹಾಕ್ಷೇತ್ರ ಬೆಂಗಳೂರು ಇದರ ಸಂಸ್ಥಾಪಕ, ಜ್ಯೋತಿಷ್ಯ ವಿದ್ವಾನ್‌ ಡಾ| ಭಗವಾನ್‌ ವಿಷ್ಣುದತ್ತ ಸ್ವರೂಪ ಪ್ರಭೂಜಿ ಅವರನ್ನು ಅಸೋಸಿಯೇಶನ್‌ ವತಿಯಿಂದ ಗೌರವಿಸಲಾಯಿತು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್‌, ಎನ್‌. ಟಿ. ಪೂಜಾರಿ,  ಚಂದ್ರಶೇಖರ ಪೂಜಾರಿ, ಕೋಟಿ ಮಹಾಕ್ಷೇತ್ರದ ವಿದ್ವಾನ್‌ ಜಿ. ವಿ. ವೇಣುಗೋಪಾಲ್‌, ಚಂದ್ರಶೇಖರ ಪಾಲೆತ್ತಾಡಿ,  ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಮಹೇಂದ್ರ ಸೂರು ಕರ್ಕೇರ, ಗೌರವ ಪ್ರಧಾನ  ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಜಪಯಜ್ಞ ನೆರವೇರಿಸಿದ ಪ್ರಭಾಕರ ಸಸಿಹಿತ್ಲು, ಭಾರತ್‌ ಬ್ಯಾಂಕ್‌ನ ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ ರಾಜಶೇಖರ್‌ ಕೆ. ಎಂ. ಬೆಂಗಳೂರು, ಪುರೋಹಿತರಾಗಿ ದೀಕ್ಷೆ ಸ್ವೀಕರಿಸಿದ ರವೀಂದ್ರ ಎ. ಅಮೀನ್‌,  ಸಮಾಜ ಸೇವಕ ಸದಾಶಿವ ಎ. ಕರ್ಕೇರ, ಪೂರ್ವಾಧ್ಯಕ್ಷ ಎಲ್‌. ವಿ. ಅಮೀನ್‌, ಲೀಲಾವತಿ ಜಯ ಸುವರ್ಣ, ಶಶಿ ನಿತ್ಯಾನಂದ್‌ ಕೋಟ್ಯಾನ್‌, ಯಶೋದಾ ಎನ್‌. ಟಿ. ಪೂಜಾರಿ, ಪ್ರಭಾ ಎನ್‌. ಪಿ. ಸುವರ್ಣ, ಪೂಜಾ ಪುರುಷೋತ್ತಮ್‌, ಭವನದ ಪ್ರಬಂಧಕ ಭಾಸ್ಕರ್‌ ಟಿ. ಪೂಜಾರಿ, ಯುವಾಭ್ಯುದಯ ಉಪ ಸಮಿತಿಯ ಮುಖ್ಯಸ್ಥ ನಿಲೇಶ್‌ ಪೂಜಾರಿ ಪಲಿಮಾರ್‌, ಸೇವಾ ದಳಪತಿ ಗಣೇಶ್‌ ಕೆ. ಪೂಜಾರಿ, ಭಾರತ್‌ ಬ್ಯಾಂಕ್‌ನ ನಿರ್ದೇಶಕರು, ಉನ್ನತಾಧಿಕಾರಿಗಳು ಸೇರಿದಂತೆ ಅಸೋಸಿಯೇಶನ್‌ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next