Advertisement

ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರ ವಜಾಕ್ಕೆ ವಿಧೇಯಕ ಮಂಡನೆ

10:32 PM Dec 07, 2022 | Team Udayavani |

ತಿರುವನಂತಪುರ: ವಿವಿಗಳಿಂದ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಅವರನ್ನು ಕುಲಾಧಿಪತಿ ಸ್ಥಾನದಿಂದ ತೆಗೆದು ಹಾಕುವ ವಿಧೇಯಕವನ್ನು ಕೇರಳ ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಗಿದೆ.

Advertisement

ವಿಶ್ವವಿದ್ಯಾಲಯ ಕಾಯ್ದೆ (ತಿದ್ದುಪಡಿ) ವಿಧೇಯಕವನ್ನು ಕಾನೂನು ಸಚಿವ ಪಿ.ರಾಜೀವ್‌ ಅವರು ಮಂಡಿಸಿದ್ದಾರೆ. ವಿವಿಗಳಲ್ಲಿ ನೇಮಕ ವಿಚಾರದಲ್ಲಿ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ವಿಧೇಯಕದ ಅಂಶಗಳ ಪ್ರಕಾರ ವಿವಿಗಳ ಕುಲಾಧಿಪತಿ ಹುದ್ದೆಗೆ ಕೃಷಿ ಮತ್ತು ಪಶು ವೈದ್ಯಕೀಯ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಾಹಿತ್ಯ, ಕಾನೂನು, ಪಬ್ಲಿಕ್‌ ಅಡ್ಮಿನಿಸ್ಟ್ರೇಷನ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಪರಿಣತ ವ್ಯಕ್ತಿಯನ್ನು ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಬರುತ್ತದೆ. ಐದು ವರ್ಷಗಳ ಕಾಲ ಅವರ ಅಧಿಕಾರದ ಅವಧಿ.

ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷ ಯುಡಿಎಫ್ ವಿಧೇಯಕದ ಬಗ್ಗೆ ಪ್ರತಿಕ್ರಿಯೆ ನೀಡಿ ಸರ್ಕಾರದ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಅಡ್ಡಿ ಬರುವುದಿಲ್ಲ. ಆದರೆ, ವಿಧೇಯಕದ ಮೂಲಕ ಬದಲಿ ವ್ಯವಸ್ಥೆ ಸೂಚಿಸಬೇಕು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next