Advertisement

ಬೈಕ್ ನಲ್ಲಿ ಬಂದ ಮುಸುಕುಧಾರಿ ವ್ಯಕ್ತಿಗಳಿಂದ 13 ಲಕ್ಷ ರೂಪಾಯಿ ದರೋಡೆ

09:39 AM Dec 05, 2019 | Team Udayavani |

ರಾಯಘರ್‌: ಬ್ಯಾಂಕಿನಿಂದ 13 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ತರುತ್ತಿದ್ದವರನ್ನು ದರೋಡೆಕೋರರು ಅಡ್ಡಗಟ್ಟಿ ಅವರ ಕೈಯಲ್ಲಿದ್ದ ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಛತ್ತೀಸ್ ಗಢದ ರಾಯ್ ಗಢ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಎರಡು ಬೈಕುಗಳಲ್ಲಿ ಬಂದ ಮುಸುಕುಧಾರಿ ವ್ಯಕ್ತಿಗಳು ಕಟ್ಟಡ ನಿರ್ಮಾಣ ಗುತ್ತಿಗೆದಾರರ ಸಹಾಯಕರ ಕೈಯಲ್ಲಿದ್ದ ಈ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

Advertisement

ಇಲ್ಲಿನ ಖಾರ್ಸಿಯಾ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಶಾಖೆಯ ಎದುರೇ ಈ ಘಟನೆ ನಡೆದಿದೆ. ಕನ್ಹಯ್ಯಾ ರಾಥೋಡ್ ಎಂಬವರು ತನ್ನಿಬ್ಬರು ಸಹಾಯಕರಾದ ವಿಕಾಸ್ ರಾಥೋಡ್, ಅಂಗತ್ ರಾಮ್ ಹಾಗೂ ಕರ್ತಿಲ್  ರಾಮ್ ಅವರು ತಮ್ಮ ಮಾಲಕರ ಅಕೌಂಟಿನಿಂದ 13 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ತರುತ್ತಿದ್ದರು.

ಬ್ಯಾಂಕಿನ ಹೊರಭಾಗದಲ್ಲಿ ರಾಥೋಡ್ ಅವರ ಇನ್ನೊಬ್ಬ ಸಹಾಯಕ ಕಾರಿನಲ್ಲಿ ಕಾಯುತ್ತಿದ್ದಂತೆ ಬೈಕಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಹಣವಿದ್ದ ಬ್ಯಾಗನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದರೋಡೆ ಘಟನೆಗೆ ಸಂಬಂಧಿಸಿದಂತೆ ಖಾರ್ಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರ ಪತ್ತೆಗಾಗಿ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next