Advertisement

ಸಜೀವ ಗುಂಡು ಸಾಗಿಸುತ್ತಿದ್ದ ಬಿಹಾರ ಶಾಸಕ ವಿಮಾನ ನಿಲ್ದಾಣದಲ್ಲಿ ಸೆರೆ

05:28 AM Feb 22, 2019 | Team Udayavani |

ನವದೆಹಲಿ:ಬ್ಯಾಗ್ ನಲ್ಲಿ ಸಜೀವ ಗುಂಡು ಸಾಗಿಸುತ್ತಿದ್ದ ಬಿಹಾರದ ಆರ್ ಜೆಡಿ ಶಾಸಕ ಚಂದ್ರಶೇಖರ್ ಅವರನ್ನು ಅಧಿಕಾರಿಗಳು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಘಟನೆ ನಡೆದಿದೆ.

Advertisement

ವರದಿಯ ಪ್ರಕಾರ, ಶಾಸಕ ಚಂದ್ರಶೇಖರ್ ತನ್ನ ಬ್ಯಾಗ್ ನಲ್ಲಿ ಸುಮಾರು 10 ಸಜೀವ ಗುಂಡುಗಳನ್ನು ಇರಿಸಿಕೊಂಡಿದ್ದು, ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುವ ವೇಳೆ ಗುಂಡುಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಈ ಘಟನೆ ಫೆಬ್ರುವರಿ 20ರಂದು ನಡೆದಿದ್ದು, ಅಂದೇ ಶಾಸಕ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ.

ಬಳಿಕ ಚಂದ್ರಶೇಖರ್ ಅವರನ್ನು ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಿಲ್ಲ. ಜೀವಂತ ಗುಂಡುಗಳಿಗೆ ಸಂಬಂಧಿಸಿದಂತೆ ಸೂಕ್ಷ ದಾಖಲೆಗಳನ್ನು ನೀಡಿಲ್ಲ. ಈ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next