Advertisement

ಬೆಂಗಾವಲು ವಾಹನ ಮೇಲೆ ಟ್ರಕ್‌ ಪಲ್ಟಿ: ಇಬ್ಬರು ಗೃಹರಕ್ಷಕರು ಸೇರಿ ನಾಲ್ವರು ಸಾವು

07:29 PM May 22, 2020 | Sriram |

ಗಯಾ: ಬೆಂಗಾವಲು ವಾಹನದ ಮೇಲೆ ಟ್ರಕ್‌ ಪಲ್ಟಿಯಾದ ಪರಿಣಾಮ ಇಬ್ಬರು ಗೃಹರಕ್ಷಕರು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಪಂಚನಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ದರಿಯಾಪುರ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

Advertisement

ಮೃತರನ್ನು ಭೋಲಾ ಯಾದವ್‌ (56), ಗೃಹರಕ್ಷಕರಾದ ದಶರಥ್‌ ಯಾದವ್‌ (55), ವಿನೋದ್‌ ಶರ್ಮ (55) ಮತ್ತು ವಿಶೇಷ ಸಹಾಯಕ ಪೊಲೀಸ್‌ ಸಿಬ್ಬಂದಿ ಚಂದನ್‌ ಕುಮಾರ್‌ (20) ಎಂದು ಗುರತಿಸಲಾಗಿದೆ.

ಗಸ್ತು ತಿರುಗುತ್ತಿದ್ದ ಗಣಿ ಇಲಾಖೆಯ ಬೆಂಗಾವಲು ವಾಹನದ ಮೇಲೆ ಟ್ರಕ್‌ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ. ಈ ದುರಂತ ಬಳಿಕ ಟ್ರಕ್‌ ಚಾಲಕ ಪರಾರಿಯಾಗಿದ್ದಾನೆ ಎಂದು ಗಯಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌ ಮಿಶ್ರಾ ಹೇಳಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರುಪಾಯಿ ಪರಿಹಾರ ನೀಡಲಾಗುವುದು ಎಂದು ಗೃಹರಕ್ಷಕ ದಳದ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್‌ ಪಂಕಜ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next