Advertisement

Bihar ಸಿಎಂ ನಿತೀಶ್ ರತ್ತ ನುಗ್ಗಿ ಬಂದ ಬೈಕ್ ಚಾಲಕನ ಬಂಧನ; ತನಿಖೆ

04:13 PM Jun 15, 2023 | Team Udayavani |

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಭದ್ರತೆಯಲ್ಲಿ ಗುರುವಾರ (ಜೂನ್ 15) ಬೆಳಗ್ಗೆ ಭಾರಿ ಲೋಪವಾಗಿದ್ದು, ಅವರು ನಿವಾಸದ ಬಳಿ ಬೆಳಗಿನ ವಾಕ್ ಮಾಡುತ್ತಿದ್ದ ವೇಳೆ ಅಪರಿಚಿತ ಬೈಕ್ ಚಾಲಕನೊಬ್ಬ ನುಗ್ಗಿ ಬಂದಿದ್ದಾನೆ. ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

ಬೈಕ್ ಚಾಲಕ ಸಿಎಂ ನಿತೀಶ್ ಕುಮಾರ್ ಅವರತ್ತ ಬೈಕ್ ತೆಗೆದುಕೊಂಡು ಹೋಗಲು ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದ್ದು, ತೀರಾ ಹತ್ತಿರಕ್ಕೆ ಬಂದ ವೇಳೆ ನಿತೀಶ್ ಕುಮಾರ್ ಫುಟ್ ಪಾತ್ ಮೇಲೆ ಹತ್ತಿದ್ದಾರೆ. ಮುಖ್ಯಮಂತ್ರಿ ಎಚ್ಚೆತ್ತುಕೊಳ್ಳದಿದ್ದರೆ ಅವಘಡ ಸಂಭವಿಸಬಹುದಿತ್ತು ಎಂದು ಹೇಳಲಾಗಿದೆ. ತತ್ ಕ್ಷಣ ಬೈಕ್ ಸವಾರ ಸಿಕ್ಕಿಬಿದ್ದಿದ್ದಾನೆ. ಆದರೆ ಆತನ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ.

ಈ ವಿಚಾರದಲ್ಲಿ ಉನ್ನತ ಮಟ್ಟದ ಸಭೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ನಂತರ ಮತ್ತೊಮ್ಮೆ ಮುಖ್ಯಮಂತ್ರಿ ಭದ್ರತೆಯ ಪ್ರಶ್ನೆ ಎದ್ದಿದೆ. SSG ಕಮಾಂಡೆಂಟ್ ಮತ್ತು ಅಧಿಕಾರಿಗಳನ್ನು ಕರೆಯಲಾಗಿದ್ದು ಪಾಟ್ನಾದ ಎಸ್‌ಎಸ್‌ಪಿ ಕೂಡ ಸಿಎಂ ನಿವಾಸಕ್ಕೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next