Advertisement

ಕಿರಿಯ ನಾಯಕನ ದೊಡ್ಡ ಸಾಧನೆ

07:27 AM Nov 12, 2020 | mahesh |

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ಟ್ರೋಫಿ ಎತ್ತಲು ವಿಫ‌ಲ ವಾಗಿರಬಹುದು, ಆದರೆ ತಂಡವನ್ನು ಮೊದಲ ಸಲ ಫೈನಲ್‌ಗೆ ಕೊಂಡೊಯ್ದ ಕಾರಣಕ್ಕಾಗಿ ನಾಯಕ ಶ್ರೇಯಸ್‌ ಅಯ್ಯರ್‌ ಅವರಂತೂ ಬಹಳ ಎತ್ತರದಲ್ಲೇ ಕಾಣಿಸುತ್ತಾರೆ. ಐಪಿಎಲ್‌ ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅತೀ ಕಿರಿಯ ನಾಯಕನೆಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ.

Advertisement

ಫೈನಲ್‌ ಸೋಲಿಗೆ ಅಯ್ಯರ್‌ ನೀಡಿದ ಕಾರಣ ಎರಡು. ಮೊದಲು ಬ್ಯಾಟಿಂಗ್‌ ಆಯ್ದುಕೊಂಡೂ ಉತ್ತಮ ಆರಂಭ ಪಡೆಯಲು ವಿಫ‌ಲವಾದದ್ದು ಹಾಗೂ ತಂಡದ ಸ್ಟಾರ್‌ ವೇಗಿಗಳು ಬಹುಶಃ ಆಯಾಸಗೊಂಡಿದ್ದು. ಡೆಲ್ಲಿ ತಂಡ ಇಬ್ಬರೇ ಘಾತಕ ವೇಗಿಗಳನ್ನು ನೆಚ್ಚಿಕೊಂಡು ಹೋರಾಟ ಸಂಘಟಿಸಿದ ತಂಡ. ಕಾಗಿಸೊ ರಬಾಡ ಮತ್ತು ಅನ್ರಿಚ್‌ ನೋರ್ಜೆ ಎಂಬೆರಡು ಅಸ್ತ್ರ ಬಿಟ್ಟರೆ ಡೆಲ್ಲಿ ವೇಗದ ಬೌಲಿಂಗ್‌ ಬತ್ತಳಿಕೆ ಬಹುತೇಕ ಬರಿದು.

“ಪವರ್‌ ಪ್ಲೇಯಲ್ಲೇ ಬ್ಯಾಟಿಂಗ್‌, ಬೌಲಿಂಗ್‌ ಶಕ್ತಿಯೆರಡನ್ನೂ ಕಳೆದು ಕೊಂಡೆವು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಬಳಿಕ ಉತ್ತಮ ಆರಂಭ ಪಡೆದು ದೊಡ್ಡ ಮೊತ್ತ ಪೇರಿಸಬೇಕು. ಆದರೆ ನಾವು ಪವರ್‌ಪ್ಲೇಯಲ್ಲಿ 3 ವಿಕೆಟ್‌ ಕಳೆದುಕೊಂಡೆವು. ಹಾಗೆಯೇ ಬೌಲಿಂಗ್‌ ವೇಳೆ ಮೊದಲ 6 ಓವರ್‌ಗಳಲ್ಲೇ ಸಾಕಷ್ಟು ರನ್‌ ಬಿಟ್ಟುಕೊಟ್ಟೆವು’ ಎಂದರು.

“ತಂಡದ ಒಟ್ಟು ನಿರ್ವಹಣೆಯಿಂದ ಖುಷಿಯಾಗಿದೆ. ಈ ಲೀಗ್‌ನಲ್ಲಿ ಬಹಳಷ್ಟು ಧನಾತ್ಮಕ ಅಂಶಗಳನ್ನು ಗಳಿಸಿದೆವು. ಮುಂದಿನ ಋತುವಿನಲ್ಲಿ ಇನ್ನಷ್ಟು ಬಲಿಷ್ಠರಾಗಿ ಮರಳಲಿದ್ದೇವೆ’ ಎಂಬುದು ಡೆಲ್ಲಿ ಕಪ್ತಾನನ ವಿಶ್ವಾಸದ ಮಾತುಗಳು.

Advertisement

Udayavani is now on Telegram. Click here to join our channel and stay updated with the latest news.

Next